ಅಯ್ಯೋ ವಿಧಾತ, ಇವನೆಂತ ರೈತ?: ಗುಂಡಿನ ಗಮ್ಮತ್ತಿನಲ್ಲಿ ಕಳ್ಕೊಂಡ ಕಿಮ್ಮತ್ತು!

Published : Nov 21, 2018, 09:35 AM IST
ಅಯ್ಯೋ ವಿಧಾತ, ಇವನೆಂತ ರೈತ?: ಗುಂಡಿನ ಗಮ್ಮತ್ತಿನಲ್ಲಿ ಕಳ್ಕೊಂಡ ಕಿಮ್ಮತ್ತು!

ಸಾರಾಂಶ

‘ನಾನೊಬ್ಬ ಕುಡುಕ, ಅಲ್ಲಲ್ಲ ರೈತ’! ಗುಂಡಿನ ಗಮ್ಮತ್ತಿನಲ್ಲಿ ವ್ಯಕ್ತಿಯ ರಂಪಾಟ! ರೈತ ಎಂದು ಹೇಳಿಕೊಂಡು ಸೀನ್ ಕ್ರಿಯೇಟ್ ಮಾಡಿದ ಭೂಪ! ಪ್ರತಿಭಟನಾ ನಿರತ ರೈತರೊಂದಿಗೆ ಕುಡಿದ ಮತ್ತಿನಲ್ಲಿ ವಾಗ್ವಾದ! ಪ್ರತಿಭಟನಾ ಸ್ಥಳದಿಂದ ವ್ಯಕ್ತಿಯನ್ನು ಹೊರ ಹಾಕಿದ ಪೊಲೀಸರು

ಬೆಂಗಳೂರು(ನ.21): ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರಾಜ್ಯದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹಸಿರು ಶಾಲು ಹೊದ್ದ ಅನ್ನದಾತ ರಾಜ್ಯ ರಾಜಧಾನಿ ಬೆಂಗಳೂರಿಗೆ ಲಗ್ಗೆ ಇಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೂ ಆಗಿದೆ.

ಈ ಮಧ್ಯೆ ತಾನೊಬ್ಬ ರೈತ ಎಂದು ಹೇಳಿಕೊಂಡು ಹೋರಾಟಕ್ಕೆ ಬೆಂಬಲ ಕೊಡಲು ಬಂದಿದ್ದ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ರೈತ ಸಂಘದ ನಾಯಕರೊಂದಿಗೆ ರಂಪಾಟ ಮಾಡಿದ ಘಟನೆ ನಡೆದಿದೆ.

"

ಕುಡಿದ ಅಮಲಿನಲ್ಲಿ ಪ್ರತಿಭನಾ ಸ್ಥಳಕ್ಕೆ ಬಂದಿದ್ದ ವ್ಯಕ್ತಿ, ಪ್ರತಿಭಟನಾ ನಿರತ ರೈತರೊಂದಿಗೆ ವಾಗ್ವಾದ ನಡೆಸಿದ್ದಾನೆ. ತನ್ನನ್ನು ತಾನು ಹುಕ್ಕೇರಿ ತಾಲೂಕಿನ ಜಂಕಿಹಾಳದ ರಾಜು ನಿಂಗನಹಳ್ಳಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ರೈತ ಸಂಘದ ಹೋರಾಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ.

ವ್ಯಕ್ತಿಯ ರಂಪಾಟ ಕೇಳಿ ಒಗ್ಗೂಡಿದ ಜನ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಸ್ಥಳದಿಂದ ಹೊ ನಡೆಯುವಂತೆ ತಾಕೀತು ಮಾಡಿದ್ದಾರೆ. ನಂತರ ಮಧ್ಯಪ್ರವೇಶಿಸಿದ ಪೊಲೀಸರು ವ್ಯಕ್ತಿಯನ್ನು ಸ್ಥಳದಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!