ಶ್ರೀಮದ್ಭಗವದ್ಗೀತೆಯ ಶ್ಲೋಕ ತುಳು ಲಿಪಿಯಲ್ಲಿ ಸಮರ್ಪಣೆ

Published : Oct 25, 2023, 08:54 AM IST
ಶ್ರೀಮದ್ಭಗವದ್ಗೀತೆಯ ಶ್ಲೋಕ ತುಳು ಲಿಪಿಯಲ್ಲಿ ಸಮರ್ಪಣೆ

ಸಾರಾಂಶ

ಮಹಾರಾಷ್ತ್ರದ ಮುಂಬೈ ಹಾಗೂ ಮೂಲ್ಕಿ, ಶಿಮಂತೂರು ಪರಿಸರದ ಹಲವಾರು ತುಳು ಬಾಂಧವರಿಗೆ ತುಳು ಲಿಪಿ ಕಲಿಸುವ ಮೂಲಕ ಶಿಮಂತೂರು ಮಜಲಗುತ್ತು(ತಕ್ಕಣಪಾದೆ)ಸುರೇಖಾ ನವೀನ್ ಶೆಟ್ಟಿ ತುಳು ಲಿಪಿಯ ಅಪರೂಪದ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.

ಮೂಲ್ಕಿ (ಅ.25) : ಮಹಾರಾಷ್ತ್ರದ ಮುಂಬೈ ಹಾಗೂ ಮೂಲ್ಕಿ, ಶಿಮಂತೂರು ಪರಿಸರದ ಹಲವಾರು ತುಳು ಬಾಂಧವರಿಗೆ ತುಳು ಲಿಪಿ ಕಲಿಸುವ ಮೂಲಕ ಶಿಮಂತೂರು ಮಜಲಗುತ್ತು(ತಕ್ಕಣಪಾದೆ)ಸುರೇಖಾ ನವೀನ್ ಶೆಟ್ಟಿ ತುಳು ಲಿಪಿಯ ಅಪರೂಪದ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.

ಮುಂಬೈನಲ್ಲಿ ವಿರಾರ್ ನಲಸೋಪಾರ್ ತುಳು ಫೌಂಡೇಶನ್ ನ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ ನೇತೃತ್ವದ ಸಂಘದ ತುಳು ಕನ್ನಡಿಗರಿಗೆ ಆನ್ಲೈನ್ ಮುಖಾಂತರ ತುಳು ಲಿಪಿಯನ್ನು ಉಚಿತವಾಗಿ ಕಲಿಸಿ ತುಳುನಾಡಿನ ಸಂಸ್ಕೃತಿ ಉಳಿಸುವ ಕಾರ್ಯ ಕೈಗೊಂಡಿದ್ದಾರೆ.

ತುಳು ಲಿಪಿ ನಾಮಫಲಕ ಅನಾವರಣ: ಜಿಲ್ಲೆಯಲ್ಲಿ ಶುರುವಾಗಿದೆ ಕೊಡವ ಲಿಪಿ ಟ್ರೆಂಡ್‌!

ಮುಂಬೈ ನ ಬೋಲಿಂಜ್ ವಿರಾರ್ ನಲ್ಲಿ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ನಡೆದ ‘ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ’ ಕಾರ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯ ಶ್ಲೋಕವನ್ನು ತುಳು ಲಿಪಿಯಲ್ಲಿ ಬರೆದು ಶ್ರೀಗಳಿಗೆ ಸಮರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಸುರೇಖಾ ನವೀನ್ ಶೆಟ್ಟಿ ಅವರನ್ನು ಸ್ವಾಮೀಜಿಯವರು ಗೌರವಿಸಿದರು. ಬಳಿಕ ಜೈ ತುಳುನಾಡು ಸಂಘಟನೆಯ ಸಹಕಾರದೊಂದಿಗೆ 108 ಯಜ್ಞಾರ್ಥಿಗಳಿಗೆ ತುಳು ಲಿಪಿಯಲ್ಲಿ ಬರೆಯಲು ಪ್ರೇರೇಪಣೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ, ಹರೀಶ್ ಶೆಟ್ಟಿ ಗುರ್ಮೆ, ದಿನೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ ವಿರಾರ್, ನವೀನ್ ಶೆಟ್ಟಿ ಪಳ್ಳಿ ವಿರಾರ್, ಶಶಿಕಲಾ ಮೆಂಡನ್, ರವಿಶೆಟ್ಟಿ ಕಿಲ್ಪಾಡಿ ಉಪಸ್ಥಿತರಿದ್ದರು.

 

ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಅನುಮೋದನೆ ನೀಡಿ: ಸಚಿವ ಸುನಿಲ್‌ ಕುಮಾರ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು - Shiva Rajkumar