ಕರ್ನಾಟಕದಲ್ಲಿ ಹೇಗಿದೆ ಕ್ವಾರಂಟೈನ್ ನಿಯಮ? ಇಲ್ಲಿದೆ ಮಾರ್ಗಸೂಚಿ!

Published : Sep 12, 2020, 05:12 PM IST
ಕರ್ನಾಟಕದಲ್ಲಿ ಹೇಗಿದೆ ಕ್ವಾರಂಟೈನ್ ನಿಯಮ? ಇಲ್ಲಿದೆ ಮಾರ್ಗಸೂಚಿ!

ಸಾರಾಂಶ

ಕೊರೋನಾ ತಡೆಯಲು ಸರ್ಕಾರದಿಂದ ಕ್ವಾರಂಟೈನ್| ಸ್ವದೇಶೀ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೀಗಿದೆ ಕ್ವಾರಂಟೈನ್ ನಿಯಮ| ಕ್ವಾರಂಟೈನ್ ಯಾರಿಗೆಲ್ಲಾ ಕಡ್ಡಾಯ? ಇಲ್ಲಿದೆ ವಿವರ

ಬೆಂಗಳೂರು(ಸೆ.12): ಹೆಲ್ತ್ ಸ್ಕ್ರೀನಿಂಗ್: ಎಲ್ಲಾ ಅಂತರಾಷ್ಟ್ರೀಯ ಕೊರೋನಾ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಹಾಗೂ ಆಕ್ಸಿಮೀಟರ್ ಸ್ಕ್ರೀನಿಂಗ್ ನಡೆಸುಸುವುದು ಖಡ್ಡಾಯ.

ಕ್ವಾರಂಟೈನ್ ಯಾರ್ಯಾರಿಗೆ?

ಸ್ವದೇಶೀ ಪ್ರಯಾಣಿಕರಿಗೆ 

ಕೊರೋನಾ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಕ್ವಾರಂಟೈನ್ ಅಗತ್ಯವಿಲ್ಲ.

ಕೊರೋನಾ ಲಕ್ಷಣವಿರುವ ಪ್ರಯಾಣಿಕರು ಸ್ವಯಂ ಐಸೋಲೇಟ್ ಆಗಬೇಕು. ಕೂಡಲೇ ವೈದ್ಯರ ಸಲಹೆ ಅಥವಾ ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡಿ ಸಲಹೆ ಪಡೆದುಕೊಳ್ಳುವುದು.

ಅಂತರಾಷ್ಟ್ರೀಯ ಪ್ರಯಾಣಿಕರಿಗೆ:

ಕೊರೋನಾ ಲಕ್ಷಣವಿರುವ ಪ್ರಯಾಣಿಕರನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. 

ಆರೋಗ್ಯಾಧಿಕಾರಿಗಳೇ ಕೊರೋನಾ ಲಕ್ಷಣವಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಬೇಕೋ, ಬೇಡವೋ ಎಂಬುವುದನ್ನು ನಿರ್ಧರಿಸುತ್ತಾರೆ.

ಲಕ್ಷಣವಿಲ್ಲದ ಪ್ರಯಾಣಿಕರಿಗೆ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ.

ಉದ್ಯೋಗ ನಿಮಿತ್ತ ಪ್ರಯಾಣಿಸಿ 48 ಗಂಟೆಯೊಳಗೆ ಮರಳಿ ಬರುವವರಿಗೆ ಕ್ವಾರಂಟೈನ್‌ ಇಲ್ಲ.

ಒಂದು ವೇಳೆ ಉದ್ಯೋಗ ನಿಮಿತ್ತ ಪ್ರಯಾಣ ಕೈಗೊಂಡು 48 ಗಂಟೆ ಮೊದಲು ಮರಳಿ ಬಾರದಿದ್ದಲ್ಲ, ಆದರೆ ಏಳು ದಿನದೊಳಗೆ ಬರುವವರಿಗೆ ಕೊರೋನಾ ಟೆಸ್ಟ್ ಮಾಡಲಾಗುತ್ತದೆ. ಈ ವರದಿ ನೆಗೆಟಿವ್ ಬಂದರೆ ಅವರು ತಮ್ಮ ಮುಂದಿನ ಚಟುವಟಿಕೆ ಮಾಡಬಹುದು.

ಉದ್ಯೋಗ ನಿಮಿತ್ತ ಭೇಟಿ ನೀಡುವವರು ಕೊರೋನಾ ನೆಗೆಟಿವ್ ವರದಿಯೊಂದಿಗೆ ಬಂದರೆ ಕ್ವಾರಂಟೈನ್ ಇಲ್ಲ. ಆದರೆ ಈ ಟೆಸ್ಟ್ ಭೇಟಿ ನೀಡುವ 96 ಗಂಟೆಯೊಳಗೆ ನಡೆದಿರಬೇಕು.

ಪ್ರಯಾಣಿಕರಿಗಿರುವ ನಿರ್ಬಂಧ:

ಅಂತರಾಷ್ಟ್ರೀಯ ಪ್ರಯಾಣಿಕರು ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಹಾಗೂ ಆಪ್ತಮಿತ್ರ ಆಪ್ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಖಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು(  (https://covid19.karnataka.gov.in/new-page/softwares/en) 

ಅಂತರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕ ಬಂದಿಳಿಯುವ ಕನಿಷ್ಟ 72 ಗಂಟೆ ಮೊದಲು ಯಾತ್ರಿ ಕರ್ನಾಟಕ ಆನ್‌ಲೈನ್ ಪೋರ್ಟಲ್‌ನಲ್ಲಿ ಸೆಲ್ಫ್‌ ಡಿಕ್ಲರೇಷನ್ ಫಾರಂ ಅಗತ್ಯವಾಗಿ ತುಂಬಬೇಕು( (https://www.covidwar.karnataka.gov.in/)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ