ಚಿನ್ನಸ್ವಾಮಿ ದುರಂತಕ್ಕೆ ಆರ್‌ಸಿಬಿ ಸೇರಿ ಎರಡು ಸಂಸ್ಥೆಗಳು ನೇರ ಹೊಣೆ: ಸಿಐಡಿ ಚಾರ್ಜ್‌ಶೀಟ್

Published : Nov 19, 2025, 12:22 PM IST
Chinnaswamy Stampede

ಸಾರಾಂಶ

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ, 2,200 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದೆ. ಈ ದುರಂತಕ್ಕೆ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸಂಸ್ಥೆ ನೇರ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಪ್ರಾಣ ಕಳೆದುಕೊಂಡ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಇಲಾಖೆಯ ವೊಎಉದ್ಧವೂ ಹಲವು ಗಂಭೀರ ಪ್ರಶ್ನೆಗಳು ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದ ಸಿಐಡಿ ಇದೀಗ ಮಹತ್ವದ ಹಂತ ತಲುಪಿ, 2,200ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಸಿದ್ಧಪಡಿಸಿದೆ. ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಜ್ಜಾಗಿದೆ. ಮಾತ್ರವಲ್ಲ 11 ಜನರ ಸಾವಿಗೆ ಆರ್‌ಸಿಬಿ ಯೇ ನೇರ ಹೊಣೆ ಎಂದು ಉಲ್ಲೇಖಿಸಿದೆ.

RCB, KSCA ಮತ್ತು DNA ಮೇಲೆ ಆರೋಪ

ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು, ನೂರಾರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿಗಳು, ಗಾಯಾಳುಗಳ ವಿವರಣೆ ಹಾಗೂ ಪೊಲೀಸ್ ಇಲಾಖೆ ನೀಡಿದ ಮಾಹಿತಿ ಎಲ್ಲವೂ ಸೇರಿ ಒಟ್ಟು ಮೂರು ಸಂಸ್ಥೆಗಳಾದ RCB, KSCA ಮತ್ತು DNA ಘಟನೆಯ ನೇರ ಹೊಣೆಗಾರರು ಎಂದು ಸ್ಪಷ್ಟಪಡಿಸಿದೆ.

ಸಿಐಡಿ ಚಾರ್ಜ್ ಶೀಟ್ ಪ್ರಕಾರ:

  • ಕಾರ್ಯಕ್ರಮ ಆಯೋಜನೆಗೆ ಸರಿಯಾದ ಪ್ಲಾನ್ ಹಾಗೂ ನಿರ್ವಹಣಾ ವ್ಯವಸ್ಥೆ ಇರಲಿಲ್ಲ
  • ಕಾರ್ಯಕ್ರಮ ಆಯೋಜನೆಗೂ ಮುನ್ನ ನಡೆಯಬೇಕಾದ ಠರಾವೋ ಸಭೆ ಇದನ್ನಿ ಸರಿಯಾಗಿ ಮಾಡಿಲ್ಲ ಅನ್ನೋದು ತನಿಖೆ‌ ವೇಳೆ ಪತ್ತೆ
  • ತೆಗೆದುಕೊಂಡ ತೀರ್ಮಾನಗಳ ಕುರಿತು ಪೊಲೀಸ್ ಇಲಾಖೆಗೂ ಸರಿಯಾದ ಮಾಹಿತಿ ನೀಡದಿರುವುದು
  • ಟಿಕೆಟ್ ಮಾರಾಟ, ಆನ್‌ಲೈನ್ ಮಾಹಿತಿ ಹಾಗೂ ಟ್ವೀಟ್‌ಗಳ ಬಗ್ಗೆ ಉಂಟಾದ ಗೊಂದಲ, ಸುಳ್ಳು ವದಂತಿಗಳು, ಜನರ ಅತೀ ಹೆಚ್ಚು ಜಮಾವಣೆ ಕಾರಣ
  • RCB ಕಡೆಯಿಂದ ಉಂಟಾದ ಟಿಕೆಟ್ ಗೊಂದಲ ಈ ಘಟನೆಗೆ ಪ್ರಮುಖ ಕಾರಣವೆಂದು ತನಿಖೆ ಬಹಿರಂಗಪಡಿಸಿದೆ
  • ಕಾರ್ಯಕ್ರಮದ ಭದ್ರತೆಗಾಗಿ ಜವಾಬ್ದಾರಿಯಾಗಿದ್ದ DNA ಸಂಸ್ಥೆ ಯಾವುದೇ ಸೂಕ್ತ ಸೆಕ್ಯುರಿಟಿ ಪ್ಲಾನ್ ಹೊಂದಿರಲಿಲ್ಲ
  • ಖಾಸಗಿ ಭದ್ರತಾ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲ
  • ಪೊಲೀಸರು ನಡೆಸಬೇಕಾದ ಸಂವಹನ, ಸಹಕಾರ, ಸಂಚಲನ ವ್ಯವಸ್ಥೆಗಳು ಸಮರ್ಪಕವಾಗಿರಲಿಲ್ಲ

ಸಿಸಿಟಿವಿ, ಸಾಕ್ಷಿಗಳ ಹೇಳಿಕೆ

ತನಿಖಾ ತಂಡವು ಘಟನೆ ನಡೆದ ದಿನದ ಸ್ಟೇಡಿಯಂನ ಪ್ರತಿಯೊಂದು ಗೇಟ್‌ನಲ್ಲಿದ್ದ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದೆ. ಗೇಟ್‌ಗಳಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿಗಳ ಹೇಳಿಕೆ ಪಡೆದಿದೆ. ಡ್ಯೂಟಿಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳ ವಿವರ ಪಡೆದಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರ ಹಾಗೂ ಗಾಯಾಳುಗಳನ್ನು ಸಾಗಿಸಿದವರ ಹೇಳಿಕೆಗಳನ್ನೂ ದಾಖಲಿಸಿದೆ. ಈ ಸಮಗ್ರ ತನಿಖೆಯ ಆಧಾರದ ಮೇಲೆ, ಮೂರು ಸಂಸ್ಥೆಗಳು ಸಾವಿಗೆ ನೇರ ಹೊಣೆ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬುದು ಚಾರ್ಜ್ ಶೀಟ್ ಹೇಳುತ್ತದೆ.

11 ಜನರ ಸಾವಿಗೆ ನೇರ ಹೊಣೆ ಈ ಮೂರು ಸಂಸ್ಥೆಗಳೇ...

ತನಿಖೆಯ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಸಿಐಡಿ, ತನ್ನ ಚಾರ್ಜ್ ಶೀಟ್‌ನಲ್ಲಿ, RCB, KSCA (ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್), DNA ಇವರೆಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಜವಾಬ್ದಾರಿಯಿಲ್ಲದೇ ಆಯೋಜಿಸಿದ್ದು, ಪರಿಣಾಮವಾಗಿ 11 ಜನರು ಪ್ರಾಣ ಕಳೆದುಕೊಳ್ಳುವ ಘಟನೆ ನಡೆದಿದೆ ಎಂದು ನೇರವಾಗಿ ಉಲ್ಲೇಖಿಸಿದೆ.

ಮುಂದೇನು?

ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸುವ ಕೆಲಸ ಅಂತಿಮ ಹಂತದಲ್ಲಿದ್ದು, ಇದಾದ ಬಳಿಕ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆ ವೇಗ ಪಡೆಯಲಿದೆ. ದುರಂತಕ್ಕೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈ ಚಾರ್ಜ್ ಶೀಟ್ ಪ್ರಮುಖ ದಾಖಲೆ ಆಗಲಿದೆ. ಈ ದುರಂತದ ಬಳಿಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಹಲವು ಉನ್ನರ ಅಧಿಕಾರಿಗಳನ್ನು ವಜಾ ಮಾಡಿತ್ತು. ಸರ್ಕಾರದ ನಡೆ ವಿವಾದಕ್ಕೆ ಕಾರಣವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌