ಕೆನರಾ ಬ್ಯಾಂಕ್‌ನಿಂದ ಹೃದ್ರೋಗ ಚಿಕಿತ್ಸೆಗೆ ನೆರವು

Kannadaprabha News   | Asianet News
Published : Oct 16, 2020, 08:48 AM IST
ಕೆನರಾ ಬ್ಯಾಂಕ್‌ನಿಂದ ಹೃದ್ರೋಗ ಚಿಕಿತ್ಸೆಗೆ ನೆರವು

ಸಾರಾಂಶ

ಕೆನರಾ ಬ್ಯಾಂಡ್ ಹೃದ್ರೋಗಿಗಳ ಚಿಕಿತ್ಸೆಗೆ ನೆರವಾಗಿದೆ. ಚಿಕಿತ್ಸೆಗಾಗಿ ಹಣವನ್ನು ನೀಡಿದೆ. 

 ಬೆಂಗಳೂರು (ಅ.16):  ಕೆನರಾ ಬ್ಯಾಂಕ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್‌)ಯಡಿ 250 ಕಡುಬಡ ಹೃದ್ರೋಗಿಗಳ ಚಿಕಿತ್ಸೆಗೆ 25.97 ಲಕ್ಷ ರು. ಆರ್ಥಿಕ ನೆರವು ಹಾಗೂ ಐದು ವ್ಹೀಲ್‌ ಚೇರ್‌ಗಳನ್ನು ನೀಡಿದೆ.

ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೈ ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಅವರಿಗೆ 25,97,500 ರು. ಮೊತ್ತದ ಡಿಡಿ ಮತ್ತು ಐದು ವ್ಹೀಲ್‌ ಚೇರ್‌ಗಳನ್ನು ಹಸ್ತಾಂತರಿಸಿದರು.

ಚಿನ್ನದ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ನೋಡಿ ಅ. 15ರ ಗೋಲ್ಡ್ ರೇಟ್! ..

ಈ ವೇಳೆ ಮಾತನಾಡಿದ ಅವರು, ಕೆನರಾ ಬ್ಯಾಂಕ್‌ ಸಾಮಾಜಿಕ ಹೊಣೆಗಾರಿ ನಿಧಿಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 64 ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ನಿರುದ್ಯೋಗಿ ಯುವಕ-ಯುವತಿಯರಿಗೆ ಅಗತ್ಯ ತರಬೇತಿ ನೀಡುತ್ತಿದೆ. ಅಂತೆಯ ದೇಶಾದ್ಯಂತ 115 ವಿತ್ತೀಯ ಸಾಕ್ಷರತಾ ಕೇಂದ್ರಗಳ ಮುಖಾಂತರ ಬ್ಯಾಂಕಿಂಗ್‌ ಸಾಕ್ಷರತಾ ತಿಳಿವಳಿಕೆ ನೀಡುತಾ ಬಂದಿದೆ ಎಂದು ಹೇಳಿದರು.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಮಾತನಾಡಿ, ನಮ್ಮ ಸಂಸ್ಥೆ ರೋಗಿಗಳ ಹಣಕಾಸಿನ ಸಾಮರ್ಥ್ಯ ಪರಿಗಣಿಸುವುದಿಲ್ಲ. ಬದಲಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಪ್ರಮುಖ ಧ್ಯೇಯವಾಗಿದೆ. ‘ಚಿಕಿತ್ಸೆ ಮೊದಲು, ಹಣ ಪಾವತಿ ನಂತರ’ ಇದು ಸಂಸ್ಥೆಯ ಧ್ಯೇಯವಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ಬೆಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಲು ಎಲ್ಲೂ ಹೋಗಬೇಕಿಲ್ಲ, ಮನೆ ಬಾಗಿಲಿಗೆ ಬರಲಿದೆ ವ್ಯಾನ್