ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!

Published : Nov 18, 2019, 08:20 AM ISTUpdated : Nov 18, 2019, 04:57 PM IST
ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!

ಸಾರಾಂಶ

ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!| ಜೀತಕ್ಕಿದ್ದ 29 ಕಾರ್ಮಿಕರನ್ನು ರಕ್ಷಿಸಿದ ಉಪವಿಭಾಗಾಧಿಕಾರಿ

ಆನೇಕಲ್‌[ನ.18] ಜೀತ ಪದ್ಧತಿಗೆ ಇಟ್ಟುಕೊಂಡಿದ್ದ 29 ಜನ ಕಾರ್ಮಿಕರನ್ನು ಜಿಲ್ಲಾಧಿಕಾರಿ ಶಿವಮೂರ್ತಿ ಆದೇಶದಂತೆ ದಾಳಿ ನಡೆಸಿ ಬಂಧಮುಕ್ತಗೊಳಿಸಿ ರಕ್ಷಣೆ ಮಾಡಲಾಗಿದೆ.

ಆನೇಕಲ್‌ ತಾಲೂಕಿನ ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೂಗೂರು ಗ್ರಾಮದ ನೀಲಗಿರಿ ತೋಪಿನಲ್ಲಿ 29 ಜನರನ್ನು ಬಲವಂತವಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ಎನ್‌ಜಿಒ ಮಾಹಿತಿ ಆಧರಿಸಿ ಉಪಭಾಗಾಧಿಕಾರಿ ಡಾ.ಶಿವಣ್ಣ ನೇತೃತ್ವದಲ್ಲಿ ಆನೇಕಲ್‌ ತಹಸೀಲ್ದಾರ್‌ ದಿನೇಶ್‌ ಮತ್ತು ಉಪನಿರೀಕ್ಷಕ ಮಂಜುನಾಥ್‌ರೆಡ್ದಿ ತಂಡ ದಾಳಿ ಮಾಡಿ ಎಲ್ಲರನ್ನು ಬಂಧಮುಕ್ತಗೊಳಿಸಿದ್ದಾರೆ. ಜೀತದಾಳುಗಳು ನೆರೆಯ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ವೇಮನಪಲ್ಲಿ ಮತ್ತು ಪೆದುಗಟ್ಟಿಗ್ರಾಮದವರಾಗಿದ್ದು ಅವರನ್ನು ಒಂದು ಚಿಕ್ಕ ಶೆಡ್‌ರೀತಿಯ ಮನೆ ನಿರ್ಮಿಸಿ ಕೊಟ್ಟು ಅವರಿಂದ ನೀಲಗಿರಿ ತೋಪಿನಲ್ಲಿ ಕಟ್ಟಿಗೆ ತುಂಬುವ ಕೆಲಸಕ್ಕೆ ಇಟ್ಟುಕೊಂಡಿದ್ದರು.

ಮೂರು ದಿನಗಳ ಹಿಂದೆ ಎಸಿ ಡಾ.ಶಿವಣ್ಣ ಟೊಮೆಟೋ ವ್ಯಾಪಾರಿ ಸೋಗಿನಲ್ಲಿ ನೀಲಗಿರಿ ತೋಪಿನ ಬಳಿ ತೆರಳಿದ್ದರು. ಅಲ್ಲಿದ್ದ ಕಾರ್ಮಿಕರ ಜೊತೆಗೆ ಪಕ್ಕದ ತೋಟದಲ್ಲಿ ಟೊಮೆಟೋ ಖರೀದಿಗಿದೆಯಾ ಎಂದು ಮಾತನಾಡಿಸಿ, ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಜೀತ ಪದ್ಧತಿ ಖಚಿತವಾಗುತ್ತಿದ್ದಂತೆ ಅಧಿಕಾರಿಗಳ ತಂಡದೊಂದಿಗೆ ತೆರಳಿ ಜೀವ ಮುಕ್ತಗೊಳಿಸಿದರು.

ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು
Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!