
ಸಕಲೇಶಪುರ[ಜ.18]: ಒಂದನೇ ತರಗತಿ ವಿದ್ಯಾರ್ಥಿನಿಯ ಬಳಿ ‘ಪುಳಿಯೊಗರೆ’ ಎಂಬ ಪದದ ತೊದಲು ನುಡಿಯನ್ನೇ ಹಾಸ್ಯ ಎಂದು ಅಣಕಿಸಿ, ವೀಡಿಯೋ ಮಾಡಿದ್ದ ಶಿಕ್ಷಕನನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಮಾಡಿದ್ದು, ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕ ನಿರ್ವಾಣಪ್ಪ ಎಂಬವರೇ ಅಮಾನತುಗೊಂಡವರು.
ವಿದ್ಯಾರ್ಥಿನಿಗೆ ‘ಪುಳಿಯೊಗರೆ’ ಉಚ್ಛಾರಣೆ ಬರದಿದ್ದರೆ ಪದೇಪದೇ ಆಕೆಯಿಂದ ಹೇಳಿಸಿದ್ದು ಹಾಗೂ ವಿಡಿಯೋ ಮಾಡಿರವುದು ಸಾಬೀತಾಗಿದೆ. ಅಲ್ಲದೇ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಶಿಕ್ಷಕ ನಿರ್ವಾಣಪ್ಪನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಬಿಇಒ ಎಚ್.ಬಿ.ಶಿವಾನಂದ ತಿಳಿಸಿದ್ದಾರೆ.
ಪಕ್ಕೆಲುಬು ಬಳಿಕ ಇದೀಗ ವಿದ್ಯಾರ್ಥಿನಿ ‘ಪುಳಿಯೋಗರೆ’ ವಿಡಿಯೋ ವೈರಲ್
ಮಗುವಿಗೆ ಮಾನಸಿಕ ಹಿಂಸೆ ನೀಡಿರುವುದು ವಿಡಿಯೋದಿಂದ ಸಾಬೀತಾಗಿದೆ. ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರ ಮೇಲಾಧಿಕಾರಿಗಳ ಸುತ್ತೋಲೆ, ಆದೇಶಗಳನ್ನು ಪಾಲನೆ ಮಾಡದೆ ಬೇಜವಾಬ್ದಾರಿ ವರ್ತನೆ, ಕರ್ತವ್ಯ ಲೋಪ, ಮಗುವಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದು ಸಾಬೀತಾಗಿರುವುದರಿಂದ ಶಿಕ್ಷಕ ನಿರ್ವಾಣಪ್ಪನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
‘ಪಕ್ಕೆಲುಬು’ ವಿಡಿಯೋ ಎಫೆಕ್ಟ್: ಶಿಕ್ಷಕರ ಮೊಬೈಲ್ ಬಳಕೆಗೆ ನಿಷೇಧ!
ಪ್ರಕರಣ ವಿವರ:
ಶಾಲೆಯಲ್ಲಿ 1ನೇ ತರಗತಿಯಲ್ಲಿ ಕನ್ನಡ ಪಾಠ ಮಾಡುತ್ತಿದ ಶಿಕ್ಷಕ ನಿರ್ವಾಣಪ್ಪ ವಿದ್ಯಾರ್ಥಿಯ ಬಾಯಿಯಲ್ಲಿ ಇಡ್ಲಿ, ವಡೆ ಎಂಬ ಪದವನ್ನು ಹೇಳಿಸಿದ್ದಾರೆ. ನಂತರ ಪುಳಿಯೊಗರೆ ಎಂಬ ಪದವನ್ನು ಶಿಕ್ಷಕ ಹೇಳಿಸಿದ್ದಾನೆ. ಆ ವಿದ್ಯಾರ್ಥಿನಿಯು ಪುಳಿಯೊಗರೆ ಬದಲಿಗೆ ಪು(ಕ)ಳಿಯೊಗರೆ ಎಂಬ ಪದವನ್ನು ಪ್ರಯೋಗಿಸಿತ್ತು.
‘ಪಕ್ಕೆಲುಬು’ ಶಿಕ್ಷಕ ಕೊನೆಗೂ ಪತ್ತೆ; ಸೇವೆಯಿಂದ ಅಮಾನತು!
ಅಷ್ಟಕ್ಕೇ ಶಾಲೆಯಲ್ಲಿ ಶಿಕ್ಷಕನು ಸೇರಿದಂತೆ ಇತರೆ ಸಹಪಾಠಿಗಳು ಇತರರು ನಕ್ಕಿಬಿಟ್ಟರು. ಇದು ಒಂದು ಸಲ ಹೇಳಿಸಿದ್ದರೆ ಹಾಸ್ಯವಾಗುತ್ತಿತ್ತೇನೋ ಆದರೆ, ಈ ವಿದ್ಯಾರ್ಥಿನಿಯ ಬಳಿ ಶಿಕ್ಷಕ ನಿರ್ವಾಣಪ್ಪ ಪದೇ ಪದೇ ಹೇಳಿಸಿ ನಗುತ್ತಿದ್ದುದು ಅಪಹಾಸ್ಯಕ್ಕೀಡು ಮಾಡಿತ್ತು. ಅಲ್ಲದೇ, ವಿದ್ಯಾರ್ಥಿನಿಯನ್ನು ಅಣಕಿಸುವಂತೆ ಶಿಕ್ಷಕನು ವರ್ತನೆ ತೋರಿರುವ ಹಾಗೂ ತಪ್ಪು ಉಚ್ಛಾರಣೆ ಮಾಡಿರುವ ವಿಡಿಯೋ ಮಾಡುವ ನಿಯಮ ಉಲ್ಲಂಘಿಸಿರುವ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ