ಮಂಗಳವಾರ ರಾಜ್ಯದಲ್ಲಿ ಕೊರೋನಾ ನರ್ತನ: 3 ಲಕ್ಷ ಗಡಿಯತ್ತ ಸೋಂಕಿತ ಸಂಖ್ಯೆ

Published : Aug 25, 2020, 07:47 PM ISTUpdated : Aug 25, 2020, 07:50 PM IST
ಮಂಗಳವಾರ ರಾಜ್ಯದಲ್ಲಿ ಕೊರೋನಾ ನರ್ತನ: 3 ಲಕ್ಷ ಗಡಿಯತ್ತ ಸೋಂಕಿತ ಸಂಖ್ಯೆ

ಸಾರಾಂಶ

ಕಳೆದ ಎರಡು ದಿನಗಳ ಕಾಲ 6 ಸಾವಿರ ಒಳಗೆ ಪತ್ತೆಯಾಗಿದ್ದ ಕೊರೋನಾ ಕೇಸ್, ಇಂದು (ಮಂಗಳವಾರ) ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. .

ಬೆಂಗಳೂರು, (ಆ.25): ರಾಜ್ಯದಲ್ಲಿ ಇಂದು (ಮಂಗಳವಾರ) 8161 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,91,826 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 148 ಮಂದಿ ಮೃತಪಟ್ಟಿದ್ದು ಇದುವರೆಗೆ 4958 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

BJP ಸೇರಿದ ಅಣ್ಣಾಮಲೈಗೆ ಹೊಸ ಜವಾಬ್ದಾರಿ, IPL ವೇಳಾಪಟ್ಟಿಗೆ ಅಂತಿಮ ತಯಾರಿ: ಆ.25ರ ಟಾಪ್ 10 ಸುದ್ದಿ!

ಇನ್ನು ಕಳೆದ 24 ಗಂಟೆಗಳಲ್ಲಿ 6814 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 2,04,439 ಜನ ಡಿಸ್ಚಾರ್ಜ್ ಆದಂತಾಗಿದೆ.

ರಾಜ್ಯದಲ್ಲಿ ಇದೀಗ ಒಟ್ಟು 82,410 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿದ್ದು, ಈ ಪೈಕಿ 751 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಬಾಗಲಕೋಟೆ (83), ಬಳ್ಳಾರಿ (551), ಬೆಳಗಾವಿ (298), ಬೆಂಗಳೂರು ಗ್ರಾಮಾಂತರ (63), ಬೆಂಗಳೂರು ನಗರ (2294), ಬೀದರ್ (61), ಚಾಮರಾಜ ನಗರ (17 ), ಚಿಕ್ಕಬಳ್ಳಾಪುರ (93 ), ಚಿಕ್ಕಮಗಳೂರು (88 ), ಚಿತ್ರದುರ್ಗ ( 114), ದಕ್ಷಿಣ ಕನ್ನಡ (247), ದಾವಣಗೆರೆ (318), ಧಾರವಾಡ (204), ಗದಗ (175) , ಹಾಸನ (205 6 ) , ಹಾವೇರಿ (78 ), ಕಲಬುರುಗಿ (227 ), ಕೊಡಗು (8 ), ಕೋಲಾರ ( 47), ಕೊಪ್ಪಳ (238), ಮಂಡ್ಯ (153 ), ಮೈಸೂರು (1331) , ರಾಯಚೂರು (88), ರಾಮನಗರ (56), ಶಿವಮೊಗ್ಗ (276 ), ತುಮಕೂರು (223 ), ಉಡುಪಿ (2171), ಉತ್ತರ ಕನ್ನಡ (141 ), ವಿಜಯಪುರ (135 ), ಯಾದಗಿರಿ (132 ) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಕೊರೋನಾ ಕೇಸ್ ಪತ್ತೆಯಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!