ಎಷ್ಟೇ ಕಟ್ಟೆಚ್ಚರ, ಏನೇ ಮುಂಜಾಗ್ರತೆ ವಹಿಸ್ತಿದ್ರೂ, ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇಂದು [ಶನಿವಾರ] ಒಂದೇ ದಿನ ಐವರಿಗೆ ಮಹಾಮಾರಿ ಕೊರೋನಾ ಅಟಕಾಯಿಸಿಕೊಂಡಿದೆ. ಎಲ್ಲೆಲ್ಲಿ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, [ಮಾ.21]: ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಇತರೆ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ.
ಇಂದು [ಶನಿವಾರ] ಒಂದೇ ದಿನದಲ್ಲಿ 5 ಜನರಿಗೆ ಕೊರೋನಾ ಇರುವುದು ದೃಢವಾಗಿದ್ದು, ಜನರನ್ನ ಮತ್ತಷ್ಟು ಭಯಬೀತಿಗೊಳಗಾಗುವಂತೆ ಮಾಡಿದೆ. ಇನ್ನು ಐದು ಎಲ್ಲೆಲ್ಲಿ ಕಂಡುಬಂದಿವೆ ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಮೈಸೂರಿಗೂ ಕಾಲಿಟ್ಟ ಕೊರೋನಾ ವೈರಸ್: ಸೊಂಕಿತರ ಸಂಖ್ಯೆ 20ಕ್ಕೇರಿಕೆ
ಬೆಂಗಳೂರಿನ ಮೂವರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಹಾಗೂ ಮೈಸೂರಿನ ಒಬ್ಬರಿಗೆ ಸೋಂಕು ದೃಢಟಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಶುಕ್ರವಾರವರತೆಗೆ 15 ಇದ್ದ ಕೊರೋನಾ ಸೋಂಕಿತರ ಶನಿವಾರ 20ಕ್ಕೆ ಏರಿಕೆಯಾಗಿದೆ. ಹಾಗಾದ್ರೆ ಈ ಐವರು ಎಲ್ಲಿಂದ ಬಂದುವರ ಎನ್ನುವುದನ್ನ ನೋಡಿ.
* 16ನೇ ಸೋಂಕಿತ- 53 ವರ್ಷದ ಬೆಂಗಳೂರಿನ ಮಹಿಳೆ
* 11ನೇ ಸೋಂಕಿತನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ
* ಸೋಂಕಿತರ ಸಂಪರ್ಕದಿಂದ ಮನೆಗೆಲಸದಾಕೆಗೆ ಚಿಕಿತ್ಸೆ
-----
* 17ನೇ ಸೋಂಕಿತ - 39 ವರ್ಷದ ವ್ಯಕ್ತಿ ಬೆಂಗಳೂರು ನಿವಾಸಿ
* ಮಾರ್ಚ್ 19ರಂದು ನೆದರ್ಲ್ಯಾಂಡ್ನಿಂದ ವಾಪಸ್ಸಾಗಿದ್ದರು
-----
* 18ನೇ ಸೋಂಕಿತ- 21 ವರ್ಷದ ಯುವಕ ಬೆಂಗಳೂರು ನಿವಾಸಿ
* ಮಾರ್ಚ್ 17ರಂದು ಸ್ಕಾಟ್ಲ್ಯಾಂಡ್ನಿಂದ ವಾಪಸ್ಸಾಗಿದ್ದರು
-----
* 19ನೇ ಸೋಂಕಿತ- 31 ವರ್ಷದ ಯುವಕ, ಗೌರಿಬಿದನೂರು ನಿವಾಸಿ
* ಮಾರ್ಚ್ 14ಂದು ಮೆಕ್ಕಾದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದರು
-----
* 20ನೇ ಸೋಂಕಿತ- 35 ವರ್ಷದ ಯುವಕ ಮೈಸೂರು ನಿವಾಸಿ
* ಮಾರ್ಚ್ 19ರಂದು ದುಬೈನಿಂದ ವಾಪಸ್ಸಾಗಿದ್ದರು.
ಇನ್ನು ದೇಶದಾದ್ಯಂತ ಸೋಂಕಿತರ ಸಂಖ್ಯೆ ದಿನದಿನಕ್ಕೆ ಏರುತ್ತಲೇ ಇದೆ. ದೇಶಾದ್ಯಂತ 300ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢವಾಗಿದೆ. ಮಹಾರಾಷ್ಟ್ರದಲ್ಲಂತೂ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಲೇ ಇದ್ದು, ಒಟ್ಟು 65ಕ್ಕೇರಿದೆ.