ಗಣೇಶ ವಿಗ್ರಹ ನುಂಗಿದ 3 ವರ್ಷದ ಬಾಲಕ

Published : Jul 24, 2021, 04:40 PM IST
ಗಣೇಶ ವಿಗ್ರಹ ನುಂಗಿದ 3 ವರ್ಷದ ಬಾಲಕ

ಸಾರಾಂಶ

ಗಣೇಶ ವಿಗ್ರಹವನ್ನು ನುಂಗಿದ ಮೂರು ವರ್ಷದ ಬಾಲಕ ತಕ್ಷಣದ ಚಿಕಿತ್ಸೆ, ಅದೃಷ್ಟವಶಾತ್ ಬದುಕುಳಿದ ಕಂದ

ಬೆಂಗಳೂರು(ಜು.24): ಮೂರು ವರ್ಷದ ಬಾಲಕ ಗಣೇಶ ವಿಗ್ರಹವನ್ನು ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಕ್ಷಣದ ವೈದ್ಯಕೀಯ ನೆರವು ಸಿಕ್ಕಿದ ನಂತರ ಸುಮಾರು 5 ಸೆಂಟಿಮೀಟರ್ ಉದ್ದದ ಭಗವಾನ್ ಗಣೇಶ ವಿಗ್ರಹವನ್ನು ನುಂಗಿದ ಮೂರು ವರ್ಷದ ಬಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

ಮಗು ಬಸವ ಅವರನ್ನು ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಶುಕ್ರವಾರ ರವಾನಿಸಲಾಗಿದೆ. ಆಡುವಾಗ ಬಾಲಕ ವಿಗ್ರಹವನ್ನು ನುಂಗಿದ್ದ. ಮೇಲ್ಭಾಗದ ಎದೆಯಲ್ಲಿ ನೋವು ಮತ್ತು ಉಗುಳು ನುಂಗುವಲ್ಲಿ ತೊಂದರೆ ಉಂಟಾಯಿತು. ಆರಂಭದಲ್ಲಿ, ಎದೆ ಮತ್ತು ಕುತ್ತಿಗೆ ಎಕ್ಸರೆ ಮಾಡಲಾಯಿತು. ನಂತರ ವಿಗ್ರಹ ಬಾಲಕ ನುಂಗಿರುವುದು ಬೆಳಕಿಗೆ ಬಂದಿದೆ.

ಭಾರೀ ಮಳೆ : ರಾಜ್ಯದಿಂದ ತೆರಳುವ 15 ರೈಲು ಸಂಚಾರ ರದ್ದು

ನಂತರ ವೈದ್ಯರು ಎಂಡೋಸ್ಕೋಪಿಕ್ ವಿಧಾನವನ್ನು ಬಳಸಿಕೊಂಡು ವಿಗ್ರಹವನ್ನು ತೆಗೆದುಹಾಕಲು ಯೋಜಿಸಿದರು. ಮಗುವನ್ನು ಒಂದು ಗಂಟೆಯೊಳಗೆ ಎಂಡೋಸ್ಕೋಪಿ ಸೂಟ್‌ಗೆ ಕರೆದೊಯ್ಯಲಾಯಿತು. ಅರಿವಳಿಕೆ ನೀಡಿ ಸುರಕ್ಷಿತವಾಗಿ ವಿಗ್ರಹ ತೆಗೆದುಹಾಕಲಾಯಿತು.

ಇದು ಎದೆಯಲ್ಲಿ ಸೋಂಕು ಸೇರಿದಂತೆ ಅನ್ನನಾಳದ ರಂದ್ರಕ್ಕೆ ಕಾರಣವಾಗಬಹುದು ಎಂದು ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಶ್ರೀಕಾಂತ್ ಕೆ.ಪಿ. ಹೇಳಿದ್ದಾರೆ. ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗಳ ಆಸ್ಪತ್ರೆ ನಿರ್ದೇಶಕ ಡಾ.ಮನೀಶ್ ರೈ, ಅವರು ರೋಗಿಯನ್ನು ಮಕ್ಕಳ ತುರ್ತುಸ್ಥಿತಿಗೆ ಕರೆತಂದಾಗ ತಕ್ಷಣ ಮತ್ತು ತ್ವರಿತ ಚಿಕಿತ್ಸೆ ನೀಡಲಾಗಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು
Karnataka Winter Session: ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕಗಳು