
ಬೆಂಗಳೂರು[ಫೆ.01]: ಡಿಜಿಪಿ-ಐಜಿ ನೇಮಕಾತಿ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿರುವ ಸರ್ಕಾರವು, ಸೇವಾ ಹಿರಿತನ ಹೊಂದಿದ ಆರು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಹಾಗೂ 23 ಅಧಿಕಾರಿಗಳನ್ನು ಶುಕ್ರವಾರ ಸಾಮೂಹಿಕವಾಗಿ ವರ್ಗಾವಣೆಗೊಳಿಸಿದೆ.
ವರ್ಗಾವಣೆಗೊಂಡವರ ವಿವರ ಹೀಗಿದೆ
ಎಡಿಜಿಪಿಗಳಾದ ಪಿ.ಎಸ್.ಸಂಧು- ಐಎಸ್ಡಿ, ಟಿ.ಸುನೀಲ್ ಕುಮಾರ್- ಎಸಿಬಿ, ಸಿ.ಎಚ್.ಪ್ರತಾಪ್ ರೆಡ್ಡಿ- ಪೊಲೀಸ್ ಆಧುನೀಕರಣ ವಿಭಾಗ, ಐಜಿಪಿಗಳಾದ ಸೀಮಂತ್ ಕುಮಾರ್ ಸಿಂಗ್- ಪಶ್ಚಿಮ ವಲಯ, ಪಿ.ಹರಿಶೇಖರನ್- ತರಬೇತಿ, ಸೌಮೇಂದು ಮುಖರ್ಜಿ- ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ (ಪಶ್ಚಿಮ), ಎಸ್.ರವಿ- ಐಎಸ್ಡಿ, ಡಿಐಜಿಗಳಾದ ಪವಾರ್ ಪ್ರವೀಣ್ ಮಧುಕರ್- ಆಡಳಿತ ಡಿಜಿಪಿ ಕಚೇರಿ, ಕೆ.ಟಿ.ಬಾಲಕೃಷ್ಣ- ತರಬೇತಿ, ಡಾ.ಚಂದ್ರಗುಪ್ತ- ಮೈಸೂರು ಆಯುಕ್ತ, ಎಸ್ಪಿಗಳಾದ ಅನುಪಮ್ ಅಗರ್ವಾಲ್- ವಿಜಯಪುರ, ಡಾ.ರಾಮ್ ನಿವಾಸ್ ಸಪೆಟ್-ಎಸಿಬಿ, ಪಾಟೀಲ್ ವಿನಾಯಕ್ ವಸಂತರಾವ್- ಎಫ್ಎಸ್ಎಲ್, ನಿಕ್ಕಂ ಪ್ರಕಾಶ್ ಅಮೃತ್- ಗುಪ್ತದಳ, ಡಾ.ಕೆ.ಅರುಣ್- ಬಿಎಂಟಿಸಿ, ಡಿ.ಎಲ್.ನಾಗೇಶ್ -ಬೀದರ್, ಆರ್.ಶ್ರೀನಿವಾಸ್ ಗೌಡ- ಹಾಸನ, ಎನ್.ಯತೀಶ್- ಗದಗ, ಪಿ.ಶ್ರೀಧರ್- ಗುಪ್ತದಳ, ಜಿನೇಂದ್ರ ಖಣಗಾವಿ- ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣ, ಕೆ.ವಿ.ಜಗದೀಶ್- ಡಿಜಿಪಿ ಕಚೇರಿ, ನಾರಾಯಣ- ಬೆಂಗಳೂರು ಸಂಚಾರ (ಪೂರ್ವ) ಡಿಸಿಪಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ