
ಮುಂಬೈ(ಅ.22): ಟೀಂ ಇಂಡಿಯಾಗೆ ಈಗಲೂ ಧೋನಿಯೇ ನಾಯಕ ಎಂದು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೇಳಿದ್ದಾರೆ.
‘ಧೋನಿ ನಾಯಕತ್ವ ತ್ಯಜಿಸಿರಬಹುದು. ಆದರೆ, ಈಗಲೂ ಅವರೇ ತಂಡದ ನಾಯಕ. ಹಲವು ಸಂದರ್ಭಗಳಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕ್ಷೇತ್ರರಕ್ಷಣೆ ಬದಲಾವಣೆಗಳನ್ನು ಧೋನಿಯೇ ನೋಡಿಕೊಳ್ಳುತ್ತಾರೆ. ‘ನೀನು ಚಿಂತಿಸಬೇಡ, ನಾನು ನೋಡಿಕೊಳ್ಳುತ್ತೇನೆ ಎಂದು ಕೊಹ್ಲಿಗೆ ಧೋನಿ ಧೈರ್ಯ ತುಂಬುತ್ತಾರೆ’ ಎಂದಿದ್ದಾರೆ.
ಧೋನಿ ಓರ್ವ ಅನುಭವಿ ಆಟಗಾರನಾಗಿದ್ದು ಎದುರಾಳಿ ತಂಡದ ಬ್ಯಾಟ್ಸ್'ಮನ್'ಗಳ ತಂತ್ರವನ್ನು ಅರ್ಥಮಾಡಿಕೊಳ್ಳಬಲ್ಲ ಚಾಣಾಕ್ಷ. ಜೊತೆಗೆ ಯುವ ಆಟಗಾರರಿಗೆ ಸೂಕ್ತ ಸಲಹೆ ಸಹಕಾರ ನೀಡುತ್ತಾರೆ ಎಂದು ಚಾಹಲ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.