Wrestlers Protest: ಕುಸ್ತಿ​ಪ​ಟು​ಗ​ಳ ಭೇಟಿ​ಯಾ​ದ ಪಿ.ಟಿ. ಉಷಾ!

Published : May 04, 2023, 09:43 AM IST
Wrestlers Protest: ಕುಸ್ತಿ​ಪ​ಟು​ಗ​ಳ ಭೇಟಿ​ಯಾ​ದ ಪಿ.ಟಿ. ಉಷಾ!

ಸಾರಾಂಶ

ಕುಸ್ತಿಪಟುಗಳ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪಿ.ಟಿ. ಉಷಾ ಹೋರಾ​ಟಕ್ಕೆ ಬೆಂಬಲ, ಶೀಘ್ರ ನ್ಯಾಯ ಒದ​ಗಿ​ಸುವ ಭರ​ವ​ಸೆ ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ ಎಂದಿದ್ದ ಉಷಾ

ನವ​ದೆ​ಹ​ಲಿ(ಮೇ.04): ಕುಸ್ತಿ​ಪ​ಟು​ಗಳ ಬಗ್ಗೆ ತಮ್ಮ ಹೇಳಿ​ಕೆಗೆ ತೀವ್ರ ಟೀಕೆ ವ್ಯಕ್ತ​ವಾ​ಗುತ್ತಿ​ರುವ ನಡು​ವೆಯೇ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಬುಧ​ವಾರ ಪ್ರತಿ​ಭ​ಟನಾ ನಿರತ ಕುಸ್ತಿ​ಪ​ಟು​ಗ​ಳನ್ನು ಭೇಟಿ​ಯಾ​ಗಿದ್ದು, ಭಾರ​ತೀಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರು​ದ್ಧದ ಹೋರಾ​ಟಕ್ಕೆ ಬೆಂಬ​ಲ ಸೂಚಿ​ಸಿ​ದ್ದಾರೆ.

ಈ ಬಗ್ಗೆ ಮಾತ​ನಾ​ಡಿ​ರುವ ಕುಸ್ತಿ​ಪಟು ಭಜ​ರಂಗ್‌ ಪೂನಿಯಾ, ‘ನಮಗೆ ನ್ಯಾಯ ಒದ​ಗಿ​ಸು​ವು​ದಾಗಿ ಉಷಾ ಭರ​ವಸೆ ನೀಡಿ​ದ್ದಾರೆ. ಬ್ರಿಜ್‌ ವಿರುದ್ಧ ಕ್ರಮ​ಕೈ​ಗೊ​ಳ್ಳ​ದಿ​ದ್ದರೆ ಪ್ರತಿ​ಭ​ಟನೆ ನಿಲ್ಲಿ​ಸು​ವು​ದಿಲ್ಲ ಎಂಬು​ದನ್ನೂ ಅವ​ರಿಗೆ ಸ್ಪಷ್ಟ​ಪ​ಡಿ​ಸಿ​ದ್ದೇ​ವೆ’ ಎಂದಿ​ದ್ದಾರೆ. ಇತ್ತೀ​ಚೆಗೆ ಉಷಾ ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ’ ಎಂದಿದ್ದರು.

ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾಡಿದ್ದಾರೆ. ‘ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳಿಗೆ ನಮ್ಮ ಬಳಿ ಬರಬೇಕಿತ್ತು. ಐಒಎನಲ್ಲಿ ಇದಕ್ಕಾಗಿಯೇ ಸಮಿತಿ ಇದೆ. ಸ್ವಲ್ಪವಾದರೂ ಶಿಸ್ತು ಇರಬೇಕು. ನಮ್ಮ ಬಳಿಗೆ ಬರುವುದನ್ನು ಬಿಟ್ಟು ರಸ್ತೆಗಿಳಿದಿದ್ದಾರೆ. ಇದು ಕ್ರೀಡೆಗೆ ಮಾರಕ. ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ’ ಎಂದು ಉಷಾ ಸಿಟ್ಟು ಹೊರಹಾಕಿದ್ದರು.

ಕುಸ್ತಿಪಟುಗಳಿಗೆ ಆಘಾತ

ಉಷಾ ಅವರ ಹೇಳಿಕೆಗೆ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ವಿನೇಶ್‌ ಫೋಗಾಟ್‌ ಬೇಸರ ವ್ಯಕ್ತಪಡಿಸಿದ್ದಾರೆ. ‘ಉಷಾ ಅವರಿಂದ ಇಂತಹ ಕಠಿಣ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಅವರು ನಮಗೆ ನೆರವು ನೀಡುತ್ತಾರೆ ಎಂದುಕೊಂಡಿದ್ದೆವು’ ಎಂದು ಭಜರಂಗ್‌ ಹೇಳಿದ್ದರು.

IPL 2023 ಪಂಜಾಬ್ ಕೈಹಿಡಿದ ಲಿವಿಂಗ್‌ಸ್ಟೋನ್, ಜಿತೇಶ್; ಮುಂಬೈಗೆ 215 ರನ್ ಟಾರ್ಗೆಟ್!

ವಿಚಾ​ರ​ಣೆ: ಇನ್ನು, ಕುಸ್ತಿ​ಪ​ಟುಗಳು ಮುಚ್ಚಿದ ಲಕೋ​ಟೆ​ಯಲ್ಲಿ ಅಫಿ​ಡ​ವಿತ್‌ ಸಲ್ಲಿ​ಸಲು ಅನು​ಮತಿ ನೀಡು​ವಂತೆ ಸುಪ್ರೀಂ ಕೋರ್ಚ್‌ಗೆ ಮನವಿ ಸಲ್ಲಿ​ಸಿದ್ದು, ಈ ಬಗ್ಗೆ ಗುರು​ವಾರ ಸುಪ್ರೀಂ ಕೋರ್ಚ್‌​ನಲ್ಲಿ ವಿಚಾ​ರಣೆ ನಡೆ​ಯ​ಲಿದೆ. ಇದೇ ವೇಳೆ ಕುಸ್ತಿ ಫೆಡರೇಶನ್‌ ಚಟುವಟಿಕೆ ಬಗ್ಗೆ ವಿಶ್ವ ಕುಸ್ತಿ ಸಂಸ್ಥೆ ಪ್ರಶ್ನೆಯು ಡಬ್ಲ್ಯು​ಎ​ಫ್‌​ಐಗೆ ನೋಟಿಸ್‌ ನೀಡಿ​ದ್ದು, ಮೇ 7ರ ಚುನಾವಣೆ ಬಗ್ಗೆ ಮಾಹಿತಿ ನೀಡು​ವಂತೆ ಕೇಳಿ​ಕೊಂಡಿದೆ.

ಕ್ರೀಡಾ ತಾರೆಗಳ ಬೆಂಬ​ಲ

ಕುಸ್ತಿಪಟುಗಳ ಪ್ರತಿಭಟನೆಗೆ ವಿವಿಧ ಕ್ರೀಡೆಗಳ ತಾರೆಯರು ಬೆಂಬಲ ಸೂಚಿ​ಸಿ​ದ್ದಾರೆ. ಒಲಿಂಪಿಕ್ಸ್‌ ಚಾಂಪಿ​ಯನ್‌ ನೀರಜ್‌ ಚೋಪ್ರಾ, ಮಾಜಿ ಕ್ರಿಕೆ​ಟಿ​ಗ​ರಾದ ಹರ್ಭಜನ್‌, ಸೆಹ್ವಾಗ್‌, ಇರ್ಫಾನ್‌, ಮದನ್‌ ಲಾಲ್‌, ಟೆನಿಸ್‌ ತಾರೆ ಸಾನಿಯ ಮಿರ್ಜಾ, ಬಾಕ್ಸರ್‌ ನಿಖಾ​ತ್‌ ಜರೀ​ನ್‌, ಹಾಕಿ ಪಟು ರಾಣಿ ರಾಂಪಾಲ್‌ ಸೇರಿ​ದಂತೆ ಹಲ​ವರು ಕುಸ್ತಿ​ಪ​ಟು​ಗ​ಳಿಗೆ ನ್ಯಾಯ ದೊರ​ಕ​ಬೇಕು ಎಂದು ಒತ್ತಾ​ಯಿ​ಸಿ​ದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಸಾಮಾನ್ಯದವನಲ್ಲ! ಇವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
IPL 2026: ಕೆಕೆಆರ್ ಸತತ ಸೋಲಿಗೆ ನಾಯಕ ಅಜಿಂಕ್ಯ ರಹಾನೆಯಲ್ಲ, ಈತನೇ ನೇರ ಕಾರಣ!