Wrestlers Protest: ಬ್ರಿಜ್‌ಭೂಷಣ್‌ಗೆ ದೆಹಲಿ ಪೊಲೀಸ್‌ ಕ್ಲೀನ್‌ಚಿಟ್‌?

By Kannadaprabha NewsFirst Published Jun 1, 2023, 7:56 AM IST
Highlights

ಲೈಂಗಿಕ ಕಿರುಕುಳ ಆರೋಒ ಎದರಿಸುತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್
ಸಾಕ್ಷ್ಯಾಧಾರ ಲಭ್ಯವಾಗಿಲ್ಲ, 15 ದಿನ​ದಲ್ಲಿ ಕೋರ್ಟ್‌ಗೆ ಡೆಲ್ಲಿ ಪೊಲೀಸ್ ಅಂತಿಮ ವರದಿ
ಬ್ರಿಜ್‌ಭೂಷಣ್‌ಗೆ ಕ್ಲೀನ್‌ಚಿಟ್ ನೀಡುವ ಸಾಧ್ಯತೆ

ನವ​ದೆ​ಹ​ಲಿ(ಜೂ.01): ದೇಶದ ಅಗ್ರ ಕುಸ್ತಿ​ಪ​ಟು​ಗ​ಳಿಂದ ಲೈಂಗಿಕ ಕಿರು​ಕುಳ ಸೇರಿ​ದಂತೆ ಕೆಲ ಗಂಭೀರ ಆರೋ​ಪ​ಗ​ಳಿಗೆ ತುತ್ತಾ​ಗಿ​ರುವ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ಗೆ ಶೀಘ್ರವೇ ದೆಹಲಿ ಪೊಲೀ​ಸರು ಕ್ಲೀನ್‌ ಚಿಟ್‌ ನೀಡ​ಲಿ​ದ್ದಾರೆ ಎಂದು ಪೊಲೀಸ್‌ ಉನ್ನತ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ.

ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ‘ಇನ್ನೂ ತನಿಖೆ ಮುಗಿದಿಲ್ಲ. ಕ್ಲೀನ್‌ ಚಿಟ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು’ ಎಂದಿದ್ದಾರೆ. ಆದರೂ ಈ ವರೆಗಿನ ತನಿಖೆಯಲ್ಲಿ ಬ್ರಿಜ್‌ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಬ್ರಿಜ್‌​ಭೂ​ಷಣ್‌ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋ​ಪ​ಗ​ಳನ್ನು ಹೊರಿ​ಸಿದ್ದ ಕುಸ್ತಿ​ಪ​ಟು​ಗಳು, ಏ.23ರಿಂದ ಜಂತ​ರ್‌​ಮಂತ​ರ್‌​ನಲ್ಲಿ ಧರ​ಣಿ ಆರಂಭಿ​ಸಿ​ ಹೋರಾಟ ತೀವ್ರ​ಗೊ​ಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್‌​ಭೂ​ಷಣ್‌ ವಿರುದ್ಧ ಪೋಕ್ಸೋ ಸೇರಿ​ದಂತೆ 2 ಎಫ್‌​ಐ​ಆರ್‌ ದಾಖ​ಲಿಸಿ ದೆಹಲಿ ಪೊಲೀ​ಸರು ವಿಚಾ​ರಣೆ ಆರಂಭಿ​ಸಿ​ದ್ದರು. ದೂರು ನೀಡಿದ್ದ ಅಪ್ರಾ​ಪ್ತೆ​ಯರ ಹೇಳಿ​ಕೆ​ಗ​ಳನ್ನೂ ದಾಖ​ಲಿ​ಸ​ಲಾ​ಗಿತ್ತು. ಆದರೆ ಈ ವ​ರೆ​ಗಿನ ತನಿ​ಖೆ​ಯಲ್ಲಿ ಆರೋಪ ಸಾಬೀ​ತು​ಪ​ಡಿ​ಸುವ ಯಾವುದೇ ಸಾಕ್ಷ್ಯಾ​ಧಾ​ರ​ಗಳು ಲಭ್ಯ​ವಾ​ಗದ ಹಿನ್ನೆ​ಲೆ​ಯಲ್ಲಿ, ತನಿಖೆ ಮುಕ್ತಾ​ಯ​ಗೊ​ಳಿಸಿ 15 ದಿನಗಳೊಳಗೆ ಕೋರ್ಚ್‌ಗೆ ಅಂತಿಮ ವರದಿ ಸಲ್ಲಿಸುವು​ದಾಗಿ ಪೊಲೀಸ್‌ ಮೂಲ​ಗಳು ತಿಳಿ​ಸಿದ್ದಾಗಿ ವರ​ದಿ​ಯಾ​ಗಿ​ದೆ.

ಕುಸ್ತಿಪಟುಗಳ ಬೇಡಿಕೆ ಈಡೇರದಿದ್ದರೆ ದೆಹಲಿಗೆ ಹಾಲು ತರಕಾರಿ ಪೂರೈಗೆ ಸ್ಥಗಿತ, ನರೇಶ್ ಟಿಕಾಯತ್ ಘೋಷಣೆ!

ವಿನೇಶ್‌, ಭಜರಂಗ್‌ ಮನೆ​ಗೆ

ಏ.23ರಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌ ಹಾಗೂ ಭಜರಂಗ್‌ ಪೂನಿಯಾ, ಮಂಗ​ಳ​ವಾರ ಪದಕಗಳನ್ನು ಗಂಗಾ ನದಿಗೆ ಎಸೆ​ಯ​ಲು ಹರಿದ್ವಾರಕ್ಕೆ ತೆರಳಿದ್ದರು. ಪದಕಗಳನ್ನು ಎಸೆಯದೆ ದೆಹಲಿಗೆ ವಾಪಸಾಗಿದ್ದ ಈ ಇಬ್ಬರು ಬುಧ​ವಾರ ಹರ್ಯಾಣದಲ್ಲಿರುವ ತಮ್ಮ ಮನೆಗಳಿಗೆ ಮರ​ಳಿದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತೊಬ್ಬ ಕುಸ್ತಿಪಟು ಸಾಕ್ಷಿ ಮಲಿಕ್‌ ಇನ್ನೂ ದೆಹಲಿಯಲ್ಲೇ ಇರುವುದಾಗಿ ತಿಳಿದುಬಂದಿದೆ.

ದುಡು​ಕ​ಬೇಡಿ, ಕಾಯಿ​ರಿ: ಕ್ರೀಡಾ ಸಚಿ​ವ ಠಾಕೂ​ರ್‌

ಪ್ರಕ​ರ​ಣದ ಬಗ್ಗೆ ಮೌನ ಮುರಿ​ದಿ​ರುವ ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂರ್‌, ‘ಪೊಲೀಸರು ತನಿಖೆ ನಡೆ​ಸು​ತ್ತಿ​ದ್ದಾರೆ. ಅದು​ವ​ರೆಗೂ ಕ್ರೀಡೆ ಹಾಗೂ ಕ್ರೀಡಾ​ಳು​ಗ​ಳಿಗೆ ತೊಂದ​ರೆ​ಯಾ​ಗುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿ​ದ್ದಾ​ರೆ. ‘ಪೊ​ಲೀ​ಸ​ರ ತನಿ​ಖೆ​ಯಲ್ಲಿ ನಂಬಿಕೆ ಇಡಿ, ನಾವೂ ನಿಮ್ಮ ಜೊತೆ​ಗಿ​ದ್ದೇವೆ. ಆರೋಪ ಸಾಬೀ​ತಾ​ದರೆ ಕಠಿಣ ಶಿಕ್ಷೆ ನೀಡು​ತ್ತೇವೆ. ಕ್ರೀಡೆ​ಗಾಗಿ ಸರ್ಕಾರ ಸಾಕಷ್ಟುಶ್ರಮ ವಹಿ​ಸು​ತ್ತಿದೆ’ ಎಂದಿ​ದ್ದಾರೆ.

ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್‌ ಸವಾ​ಲು

ತಮ್ಮ ವಿರುದ್ಧದ ಎಲ್ಲಾ ಆರೋ​ಪ​ಗ​ಳನ್ನು ನಿರಾ​ಕ​ರಿ​ಸು​ತ್ತಿ​ರುವ ಡಬ್ಲ್ಯು​ಎ​ಫ್‌ಐ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌, ಒಂದೇ ಒಂದು ಆರೋಪ ಸಾಬೀತಾದರೂ ಸ್ವತಃ ತಾವೇ ನೇಣಿ​ಗೇ​ರು​ವು​ದಾಗಿ ಮತ್ತೊಮ್ಮೆ ಸವಾಲು ಹಾಕಿ​ದ್ದಾರೆ. ಈ ಬಗ್ಗೆ ಸಾರ್ವಜನಿಕ ಕಾರ‍್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಕುಸ್ತಿ​ಪ​ಟು​ಗಳು ಹೋರಾಟ ಆರಂಭಿಸಿ 4 ತಿಂಗ​ಳಾ​ಯಿತು. ಆದರೆ ಆರೋಪ ಸಾಬೀತು ಪಡಿ​ಸಲು ಸಾಧ್ಯ​ವಾ​ಗಿಲ್ಲ. ಅವ​ರಲ್ಲಿ ಸಾಕ್ಷ್ಯಾ​ಧಾ​ರ​ಗ​ಳಿ​ದ್ದರೆ ನ್ಯಾಯಾ​ಲ​ಯದಲ್ಲಿ ಸಾಬೀ​ತು​ಪ​ಡಿ​ಸಲಿ. ನಾನು ಯಾವುದೇ ಶಿಕ್ಷೆಗೂ ಸಿದ್ಧ. ಅದನ್ನು ಬಿಟ್ಟು ಗಂಗಾ ನದಿಗೆ ಪದಕ ಎಸೆ​ಯು​ವು​ದ​ರಿಂದ ನನ್ನ ವಿರು​ದ್ಧದ ಆರೋಪ ಸಾಬೀ​ತು​ಪ​ಡಿ​ಸಲು ಸಾಧ್ಯವಿಲ್ಲ’ ಎಂದಿದ್ದಾರೆ.

click me!