ದುಬೈ ಓಪನ್: ಸೆಮೀಸ್'ಗೆ ಲಗ್ಗೆಯಿಟ್ಟ ಸಿಂಧು; ಶ್ರೀಕಾಂತ್'ಗೆ ಮತ್ತೆ ನಿರಾಸೆ

Published : Dec 14, 2017, 10:36 PM ISTUpdated : Apr 11, 2018, 01:10 PM IST
ದುಬೈ ಓಪನ್: ಸೆಮೀಸ್'ಗೆ ಲಗ್ಗೆಯಿಟ್ಟ ಸಿಂಧು; ಶ್ರೀಕಾಂತ್'ಗೆ ಮತ್ತೆ ನಿರಾಸೆ

ಸಾರಾಂಶ

36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅನಾಯಾಸವಾಗಿ ಸಿಂಧು ಗೆಲುವಿನ ನಗೆ ಬೀರಿದರು. ‘ಎ’ ಗುಂಪಿನಲ್ಲಿರುವ ಸಿಂಧು, ಜಪಾನ್‌'ನ ಸಯಾಕ ಸಾಟೊ ವಿರುದ್ಧ 21-13, 21-12 ನೇರ ಗೇಮ್‌'ಗಳಲ್ಲಿ ಭರ್ಜರಿ ಜಯ ಸಾಧಿಸಿದರು.

ದುಬೈ(ಡಿ.14): ರಿಯೊ ಬೆಳ್ಳಿಪದಕ ವಿಜೇತೆ ಪಿ.ವಿ. ಸಿಂಧು ದುಬೈ ಸೂಪರ್ ಸೀರೀಸ್ ಫೈನಲ್ ಪಂದ್ಯಾವಳಿಯಲ್ಲಿ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.

36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅನಾಯಾಸವಾಗಿ ಸಿಂಧು ಗೆಲುವಿನ ನಗೆ ಬೀರಿದರು. ‘ಎ’ ಗುಂಪಿನಲ್ಲಿರುವ ಸಿಂಧು, ಜಪಾನ್‌'ನ ಸಯಾಕ ಸಾಟೊ ವಿರುದ್ಧ 21-13, 21-12 ನೇರ ಗೇಮ್‌'ಗಳಲ್ಲಿ ಭರ್ಜರಿ ಜಯ ಸಾಧಿಸಿದರು. ಇನ್ನು ಶುಕ್ರವಾರ ನಡೆಯಲಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸಿಂಧು ಜಪಾನ್'ನ ಮತ್ತೋರ್ವ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ.

ಇದಕ್ಕೂ ಮೊದಲು ಪುರುಷರ ಸಿಂಗಲ್ಸ್'ನಲ್ಲಿ ಭಾರತದ ಅನುಭವಿ ಶಟ್ಲರ್ ಕೆ. ಶ್ರೀಕಾಂತ್ ಮತ್ತೊಮ್ಮೆ ನಿರಾಸೆ ಅನುಭವಿಸಿ ಟೂರ್ನಿಯಿಂದಲೇ ಹೊರಬಿದ್ದರು. ಇಂದು ನಡೆದ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಶ್ರೀಕಾಂತ್, ತೈಪೆಯ ಚೌ ಟಿಯಾನ್ ಚೆನ್ ವಿರುದ್ಧ 18-21, 18-21ರಲ್ಲಿ ರೋಚಕ ಸೋಲು ಕಂಡು ನಿರಾಸೆ ಅನುಭವಿಸಿದರು.

ನಿನ್ನೆ(ಬುಧವಾರ) ನಡೆದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಶ್ರೀಕಾಂತ್ ಸೋಲು ಕಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾ. ಕುನ್ಹಾ ಆಯೋಗದ ಶಿಫಾರಸು ಪಾಲಿಸಿದ್ರೆ ಕ್ರಿಕೆಟ್‌ಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
ವಿಜಯ್ ಹಜಾರೆ ಟ್ರೋಫಿ: ಇಂದು ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ!