ಬೆಂಗಳೂರಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕಾರಣವೇನು: ಕನ್ನಡಿಗರಿಗೆ ಮೋಸ ಮಾಡಿದ್ರಾ ಕೊಹ್ಲಿ?

Published : Sep 28, 2017, 11:33 PM ISTUpdated : Apr 11, 2018, 01:03 PM IST
ಬೆಂಗಳೂರಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕಾರಣವೇನು: ಕನ್ನಡಿಗರಿಗೆ ಮೋಸ ಮಾಡಿದ್ರಾ ಕೊಹ್ಲಿ?

ಸಾರಾಂಶ

ವಿರಾಟ್​​ ಕೊಹ್ಲಿ ಬೆಂಗಳೂರಿಗರಿಗೆ ಮೋಸ ಮಾಡಿಬಿಟ್ರು. ತನ್ನ 2ನೇ ತವರಿನಲ್ಲಿ ಉದ್ಧಟತನ ಮೆರೆದುಬಿಟ್ರು. ಹಬ್ಬದ ದಿನ ಖುಷಿಯಿಂದ ಎದ್ದು ಸಿಹಿಸುದ್ದಿ ಕೇಳಬೇಕಾಗಿದ್ದ ಜನರಿಗೆ ಕೊಹ್ಲಿ ಕಹಿ ಸುದ್ದಿ ನೀಡುವಂತೆ ಮಾಡಿಬಿಟ್ರು. ವಿರಾಟ್​ ಬೆಂಗಳೂರಿಗೆ ಮಾಡಿರುವ ಈ ದ್ರೋಹವನ್ನ ಇಲ್ಲಿನ ಜನ ಮರೆಯಲು ತಂಬಾ ದಿನಗಳೇ ಬೇಕು ಅನಿಸುತ್ತಿದೆ.

ಸತತ ಗೆಲುವುಗಳಿಂದ ಮದವೇರಿಸಿಕೊಂಡಿದ್ದ ಟೀಂ ಇಂಡಿಯಾಗೆ ನಿನ್ನೆ ಸಖತ್​ ಶಾಕ್​​ ಆಗಿದೆ. ಆದ್ರೆ ನಿನ್ನೆಯ ಸೋಲಿಗೆ  ಕಾರಣರ್ಯಾರು..? ಗೆಲುವಿನ ಹಳಿಯಲ್ಲಿ ಸಾಗುತ್ತಿದ್ದ ಟೀಂ ಇಂಡಿಯಾವನ್ನ ದಾರಿ ತಪ್ಪಿಸಿದ್ದು ಯಾರು..? ಈ ಎಲ್ಲಾ ಪ್ರಶ್ನೆಗಳು ಸದ್ಯ ಕೋಟ್ಯಾಂತರ ಕ್ರಿಕೆಟ್​​ ಪ್ರೇಮಿಗಳನ್ನ ಕಾಡುತ್ತಿದೆ. ಆ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ನಿಜಕ್ಕೂ ಟೀಂ ಇಂಡಿಯಾ ಕಳೆದ ಒಂದು ತಿಂಗಳು ಇದ್ದ ಉರುಪಿನಲ್ಲಿ ಇಂದು ಇರಲಿಲ್ಲ. ಕೇವಲ ಗೆಲುವಿನ ರುಚಿಯನ್ನ ನೋಡುತ್ತಿದ್ದ ಬ್ಲೂ ಬಾಯ್ಸ್​​ಗೆ ಸೋಲು ಅನ್ನೋ ವಿಷ ನಿನ್ನೆ ಗಂಟಲು ಸೇರಿಬಿಟ್ಟಿತ್ತು. ಆದರೆ ಇದೇ ಟೀಂ ಇಂಡಿಯಾ ಕಳೆದ ಒಂದು ತಿಂಗಳ ಕಾಲ ಇದ್ದಹಾಗೆ ಇದ್ದಿದ್ರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಅದನ್ನ ಬಿಟ್ಟು ಅತಿಯಾದ ಆತ್ಮವಿಶ್ವಾಸದಿಂದ, ಏನೇ ಮಾಡಿದರೂ ಗೆಲ್ತೀವಿ ಅನ್ನೋ ಅಹಂಕಾರ ನಿನ್ನೆ ಅವರನ್ನ ತಲೆತಗ್ಗಿಸುವಂತೆ ಮಾಡಿದೆ. ಅಷ್ಟಕ್ಕು ಇದಕ್ಕೆಲ್ಲಾ ಕಾರಣ ನಾಯಕ ವಿರಾಟ್​​​ ಕೊಹ್ಲಿ.

ಬೆಂಗಳೂರಿಗೆ ಮೋಸ ಮಾಡಿದ್ರಾ ?

ವಿರಾಟ್​​ ಕೊಹ್ಲಿ ಬೆಂಗಳೂರಿಗರಿಗೆ ಮೋಸ ಮಾಡಿಬಿಟ್ರು. ತನ್ನ 2ನೇ ತವರಿನಲ್ಲಿ ಉದ್ಧಟತನ ಮೆರೆದುಬಿಟ್ರು. ಹಬ್ಬದ ದಿನ ಖುಷಿಯಿಂದ ಎದ್ದು ಸಿಹಿಸುದ್ದಿ ಕೇಳಬೇಕಾಗಿದ್ದ ಜನರಿಗೆ ಕೊಹ್ಲಿ ಕಹಿ ಸುದ್ದಿ ನೀಡುವಂತೆ ಮಾಡಿಬಿಟ್ರು. ವಿರಾಟ್​ ಬೆಂಗಳೂರಿಗೆ ಮಾಡಿರುವ ಈ ದ್ರೋಹವನ್ನ ಇಲ್ಲಿನ ಜನ ಮರೆಯಲು ತಂಬಾ ದಿನಗಳೇ ಬೇಕು ಅನಿಸುತ್ತಿದೆ.

ನಿನ್ನೆಯ ಸೋಲಿಗೆ ಕೊಹ್ಲಿಯೇ ಕಾರಣ..!

ಹ್ಯಾಟ್ರಿಕ್​ ಜಯ ಸಾಧಿಸಿ ಸರಣಿ ಗೆದ್ದಾಗ ಇಡೀ ಭಾರತವೇ ಟೀಂ ಇಂಡಿಯಾ ವೈಟ್​​ ವಾಷ್​​ ಮಾಡಿಬಿಡುತ್ತೆ ಅಂತ ಅಂದುಕೊಂಡಿತ್ತು. ಆದರೆ ಕೊಹ್ಲಿ ಭಾರತೀಯರ ಆಸೆಯನ್ನ ಕಾಲಕೆಳಗೆ ಹಾಕಿಕೊಂಡುಬಿಟ್ಟರು. ಸರಣಿ ಗೆದ್ದುಬಿಟ್ಟು ಮಹಾಸಾಧನೆಯನ್ನ ಮಾಡಿಬಿಟ್ಟಿದ್ದೇವೆ ಅನ್ನೋ ಹಾಗೆ ನಿನ್ನೆಯ ಪಂದ್ಯದಲ್ಲಿ 3 ಬದಲಾವಣೆಗಳನ್ನ ಮಾಡಿಬಿಟ್ಟಿದ್ರು. ಅಷ್ಟೇ ಅಲ್ಲ ಸರಣಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ಕುಲ್​ದೀಪ್​​ ಯಾದವ್​​, ಜಸ್​​ಪ್ರೀತ್​​ ಬುಮ್ರಾ ಮತ್ತು ಭುವನೇಶ್ವರ್​​ ಕುಮಾರ್​​​​ರನ್ನ ಕೂರಿಸಿಬಿಟ್ಟಿದ್ರು.

ಮೂರು ಬದಲಾವಣೆ

ಮೂರು ಬೆಸ್ಟ್​​ ಪ್ಲೇಯರ್​​ಗಳನ್ನ ಕೂರಿಸಿ ಉಮೇಶ್​​ ಯಾದವ್​, ಮೊಹಮ್ಮದ್​​ ಶಮಿ ಮತ್ತು ಅಕ್ಷರ್​​ ಪಟೇಲ್​​ ಏನೋ ಮಾಡಿಬಿಡ್ತಾರೆ ಅಂತ ಕೊಹ್ಲಿ ತಂಡಕ್ಕೆ ಸೇರಿಸಿಕೊಂಡರು. ಆದರೆ ಈ ಮೂರು ಜನ ಏನು ಮಾಡಿದರೂ ಅನ್ನೋದನ್ನ ಹೇಳೋ ಅವಶ್ಯಕತೇ ಇಲ್ಲ. ಬೇಕಾಬಿಟ್ಟಿ ರನ್​​ ನೀಡಿದರು. ಕೊನೆಪಕ್ಷ ​​​ ಕನ್ನಡಿಗ ಕೆ.ಎಲ್​ ರಾಹುಲ್​ನ್ನನ್ನಾದ್ರೂ ಆಡುವ ಹನ್ನೊಂದರಲ್ಲಿ ಸೇರಿಸಿಕೊಂಡಿದ್ದಿದ್ದರೆ ಅಂತಿಮ ಕ್ಷಣದಲ್ಲಿ ತಂಡ ಎಡವುತ್ತಿರಲಿಲ್ಲ. ಆದರೆ ಕೊಹ್ಲಿ ಟೀಂ ಸೆಲಕ್ಷನ್​ನಲ್ಲಿ ಎಡವಟ್ಟು ಮಾಡಿಕೊಂಡುಬಿಟ್ಟರು.

21 ರನ್'ಗೆ ಔಟಾದ ಕೊಹ್ಲಿ

ಮೊದಲೇ ಬೌಲಿಂಗ್​ ಡಿಪಾರ್ಟ್​ಮೆಂಟನ್ನ ಹಾಳು ಮಾಡಿದ್ದ ಕೊಹ್ಲಿ ಬ್ಯಾಟಿಂಗ್​​ನಲ್ಲೂ ಮುಗ್ಗರಿಸಿದ್ದರು. ಬೆಂಗಳೂರಿನಲ್ಲಿ ರನ್​ ಗುಡ್ಡೆಹಾಕಿರುವ ಕೊಹ್ಲಿ ನಿನ್ನೆ ಕೇವಲ 21 ರನ್​ಗಳಿಸಿ ವಿಫಲರಾಗೋದಲ್ಲದೇ, ಉತ್ತಮವಾಗಿ ಆಡ್ತಿದ್ದ ರೋಹಿತ್​​ ಶರ್ಮಾರನ್ನೂ ರನೌಟ್​​ ಮಾಡಿ ಬ್ಯಾಟಿಂಗ್​ ವೈಫಲ್ಯ ಕಾಣಲು ಕಾರಣರಾದರು. ಜೊತೆಗೆ ಬ್ಯಾಟಿಂಗ್ ಆರ್ಡರ್ ಬದಲಿಸಿ ಸೋಲಿನ ಖೆಡ್ಡಕ್ಕೆ ತಳ್ಳಿದರು.

ಒಟ್ಟಿನಲ್ಲಿ ನಿನ್ನೆಯ ಸೋಲಿನ ಹೋಣೆ ವಿರಾಟ್​​ ಕೊಹ್ಲಿಯೇ ಹೊರಬೇಕಾಗಿದ್ದೆ.  ಹಬ್ಬಕ್ಕೆ ಸಿದ್ಧತೆ ಮಾಡೋದನ್ನ ಬಿಟ್ಟು ಟಿವಿ ಮುಂದೆ ಕೂತವರೆಲ್ಲಾ ಇಂದು ನಿರಾಸೆ ಅನುಭವಿಸಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!
ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ಸಕ್ರಿಯ ಅಟಗಾರ