ಯುವಿಗಿಂದು 300ನೇ ಪಂದ್ಯ; ದಾದಾ ಸೇರಿದಂತೆ ಕ್ರಿಕೆಟ್ ದಿಗ್ಗಜರು ಯುವಿಗೆ ಶುಭಕೋರಿದ್ದು ಹೀಗೆ

Published : Jun 15, 2017, 06:48 PM ISTUpdated : Apr 11, 2018, 12:55 PM IST
ಯುವಿಗಿಂದು 300ನೇ ಪಂದ್ಯ; ದಾದಾ ಸೇರಿದಂತೆ ಕ್ರಿಕೆಟ್ ದಿಗ್ಗಜರು ಯುವಿಗೆ ಶುಭಕೋರಿದ್ದು ಹೀಗೆ

ಸಾರಾಂಶ

ಮುಂದಿನ 2019ರ ಏಕದಿನ ವಿಶ್ವಕಪ್‌'ನಲ್ಲಿ ಯುವರಾಜ್ ಸಿಂಗ್, ಆಡುವ ವಿಶ್ವಾಸವಿದೆ ಎಂದು ಗಂಗೂಲಿ ಹೇಳಿದ್ದಾರೆ. ಅಂದಹಾಗೆ 300 ಏಕದಿನ ಪಂದ್ಯವಾಡುತ್ತಿರುವ ಭಾರತದ ಐದನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಯುವಿ ಪಾತ್ರವಾಗಿದ್ದಾರೆ.

ಲಂಡನ್(ಜೂ.15): 2000ನೇ ಇಸವಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೂಲಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಇಂದು ಏಕದಿನ ಕ್ರಿಕೆಟ್'ನ 300ನೇ ಪಂದ್ಯವನ್ನಾಡುತ್ತಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವಿ, ಆನಂತರ ಕ್ಯಾನ್ಸರ್ ಮಹಾಮಾರಿಯೊಂದಿಗೆ ಸೆಣಸಿ ಜನತೆಗೆ ಸ್ಪೂರ್ತಿ ಎನಿಸಿದ್ದಾರೆ.

ಇಂದು ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯವು

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿದ್ದು, ಈ ಪಂದ್ಯಯು ಯುವಿ ಪಾಲಿಗೆ 300ನೇ ಅಂತರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.

ಈ ಐತಿಹಾಸಿಕ ಪಂದ್ಯವಾಡುತ್ತಿರುವ ಯುವರಾಜ್ ಸಿಂಗ್‌'ಗೆ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಹರ್ಭಜನ್ ಸಿಂಗ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ದಿಗ್ಗಜ ಕ್ರಿಕೆಟಿಗರು ಅಭಿನಂದಿಸಿದ್ದಾರೆ.

ಮುಂದಿನ 2019ರ ಏಕದಿನ ವಿಶ್ವಕಪ್‌'ನಲ್ಲಿ ಯುವರಾಜ್ ಸಿಂಗ್, ಆಡುವ ವಿಶ್ವಾಸವಿದೆ ಎಂದು ಗಂಗೂಲಿ ಹೇಳಿದ್ದಾರೆ. ಅಂದಹಾಗೆ 300 ಏಕದಿನ ಪಂದ್ಯವಾಡುತ್ತಿರುವ ಭಾರತದ ಐದನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಯುವಿ ಪಾತ್ರವಾಗಿದ್ದಾರೆ.

ಯುವಿಗೆ ಕ್ರಿಕೆಟ್ ದಿಗ್ಗಜರು ಹರಿಸಿದ್ದು ಹೀಗೆ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!