ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!

Published : Aug 23, 2019, 09:58 PM IST
ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!

ಸಾರಾಂಶ

ವಿಂಡೀಸ್ ತಂಡದ ಕಮೆರ್ ರೋಚ್ ಹಾಗೂ ಗೆಬ್ರಿಯಲ್ ದಾಳಿಗೆ ತತ್ತರಿಸಿದ ಭಾರತ, ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಗಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಟೀಂ ಇಂಡಿಯಾ 297 ರನ್ ಸಿಡಿಸಿದೆ.

ಆ್ಯಂಟಿಗಾ(ಆ.23): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೊರತು ಪಡಿಸಿದರೆ ಟೀಂ ಇಂಡಿಯಾದ ಇತರರ ಬ್ಯಾಟ್ಸ್‌‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ರಹಾನೆ 81 ಹಾಗೂ ರವೀಂದ್ರ ಜಡೇಜಾ 58 ರನ್ ತಂಡದ ಗರಿಷ್ಠ ಮೊತ್ತ. ಈ ಇನಿಂಗ್ಸ್‌ನಲ್ಲಿ ಯಾವ ಭಾರತೀಯನೂ ಸೆಂಚುರಿ ದಾಖಲಿಸಿಲ್ಲ. ಹೀಗಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‍‌ಗೆ ಆಲೌಟ್ ಆಗಿದೆ.  

ಇದನ್ನೂ ಓದಿ: ಎಡವಿದ ಟೀಂ ಇಂಡಿಯಾ ಮೇಲೆತ್ತಿದ ರಹಾನೆ..!

6 ವಿಕೆಟ್ ನಷ್ಟಕ್ಕೆ 203 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾಗೆ ರವೀಂದ್ರ ಜಡೇಜಾ ಆಸರೆಯಾದರು. ಮೊದಲ ದಿನ ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಿ ಆಸರೆಯಾಗಿದ್ದರೆ, ದ್ವಿತೀಯ ದಿನ ರವೀಂದ್ರ ಜಡೇಜಾ ಸರದಿ. ದಿಟ್ಟ ಹೋರಾಟ ನೀಡಿದ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿ ನೆರವಾದರು. ರಿಷಬ್ ಪಂತ್ 24 ರನ್ ಕಾಣಿಕೆ ನೀಡಿದರು.

ಇಶಾಂತ್ ಶರ್ಮಾ 19 ರನ್ ಸಿಡಿಸಿದರು. ಮೊಹಮ್ಮದ್ ಶಮಿ ಸೊನ್ನೆ ಸುತ್ತಿದರೆ, ಜಸ್ಪ್ರೀತ್ ಬುಮ್ರಾ 4 ರನ್ ಸಿಡಿಸಿದರು. ರವೀಂದ್ರ ಜಡೇಜಾ 58 ರನ್ ಸಿಡಿಸಿ ಔಟಾಗೋ ಮೂಲಕ ಟೀಂ ಇಂಡಿಯಾ 297 ರನ್‌ಗಳಿಗೆ ಆಲೌಟ್ ಆಯಿತು. ಕೆಮರ್ ರೋಚ್ 4, ಶಾನನ್ ಗೇಬ್ರಿಯಲ್ 3 ,  ರೋಸ್ಟನ್ ಚೇಸ್ 2 ಹಾಗೂ ನಾಯಕ ಜಾಸನ್ ಹೋಲ್ಡರ್ 1 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಆಯ್ಕೆಗಾರ ಆಗಬೇಕು: ಸೆಹ್ವಾಗ್‌!

ಭಾರತ ಮೊದಲ ಇನ್ನಿಂಗ್ಸ್ ಸಂಕ್ಷಿಪ್ತ ಸ್ಕೋರ್:
ಕೆಎಲ್ ರಾಹುಲ್ 44
ಅಜಿಂಕ್ಯ ರಹಾನೆ 81
ಹನುಮಾ ವಿಹಾರಿ 32
ರವೀಂದ್ರ ಜಡೇಜಾ 58
ರಿಷಬ್ ಪಂತ್  24

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ವೇದಿಕೆ ರೆಡಿ; ಸೆಮೀಸ್‌, ಫೈನಲ್‌ಗೆ ಭಾರತವೇ ಆತಿಥ್ಯ!
ಕ್ರೀಡಾಲೋಕದ ಮೇಲೆ ಯುದ್ದದ ಕಾರ್ಮೊಡ; ನಾವಿದ್ದ ಸ್ಥಳದ ಸಮೀಪವೇ ಸ್ಪೋಟವಾಯಿತು ಎಂದ ಸಿಂಧು!