
ರಾಂಚಿ(ಮಾ.16): ನಾಯಕ ವಿರಾಟ್ ಕೊಹ್ಲಿಯ ಸೂಕ್ಷ್ಮಗ್ರಹಿಕೆಯಿಂದ ತೆಗೆದುಕೊಂಡ ಡಿಆರ್'ಎಸ್ ನಿರ್ಧಾರ ಟೀಂ ಇಂಡಿಯಾ ಪಾಲಿಗೆ ವರವಾಗಿ ಪರಿಣಮಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಿಸಿಕೊಂಡಿದೆ. ಭೋಜನ ವಿರಾಮಕ್ಕೂ ಮುನ್ನ ಕೊಹ್ಲಿ ತೆಗೆದುಕೊಂಡ ಡಿಆರ್'ಎಸ್ ತೀರ್ಮಾನ ಆಸ್ಟ್ರೇಲಿಯಾ ತಂಡದ ಮೂರನೇ ವಿಕೆಟ್ ಪತನಕ್ಕೆ ಕಾರಣವಾಯಿತು.
ಅಶ್ವಿನ್ ಎಸೆದ ಪಂದ್ಯದ 26ನೇ ಓವರ್'ನ ಮೊದಲ ಎಸೆತವು ಶಾನ್ ಮಾರ್ಶ್ ಬ್ಯಾಟ್ ಸವರಿ ಪ್ಯಾಡ್'ಗೆ ಮುತ್ತಿಕ್ಕಿದ್ದ ಚೆಂಡನ್ನು ಚೇತೇಶ್ವರ್ ಪೂಜಾರ ಅದ್ಭುತ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಕ್ಯಾಚ್'ಗೆ ಮನವಿ ಮಾಡಿದರೂ ಅಂಪೈರ್ ಅದನ್ನು ಪುರಸ್ಕರಿಸಲಿಲ್ಲ. ಆಗ ಕೊಹ್ಲಿ ಡಿಆರ್'ಎಸ್ ತೆಗೆದುಕೊಂಡರು...
ಹೀಗಿತ್ತು ಆ ಕ್ಷಣ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.