ಕೊಹ್ಲಿ ರಾಯಭಾರಿಯಾಗಿದ್ದ ಜಾಹೀರಾತಿಂದ ಅಕ್ರಮ?

Published : Feb 25, 2017, 06:32 PM ISTUpdated : Apr 11, 2018, 12:35 PM IST
ಕೊಹ್ಲಿ ರಾಯಭಾರಿಯಾಗಿದ್ದ ಜಾಹೀರಾತಿಂದ ಅಕ್ರಮ?

ಸಾರಾಂಶ

‘2013ರಲ್ಲಿ ಪ್ರವಾಹಕ್ಕೆ ತತ್ತರಿಸಿದ್ದ ಉತ್ತರಾಖಂಡ್ ಜನತೆಯ ಪುನರ್ವಸತಿಗಾಗಿ ನೀಡಲಾಗಿದ್ದ ಹಣವನ್ನು 2015ರಲ್ಲಿ ಪ್ರವಾಸ ತಾಣಗಳ ಪ್ರಚಾರಕ್ಕೆ ರಾವತ್ ಸರ್ಕಾರ ಬಳಕೆ ಮಾಡಿದೆ’ ಎಂದು ರಾವತ್ ವಿರುದ್ಧ ಅಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡೆಹ್ರಾಡೂನ್(ಫೆ.26): ಉತ್ತರಾಖಂಡ್‌ನ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಪತ್ತು ಪರಿಹಾರ ಧನವನ್ನು ರಾಜ್ಯ ಪ್ರವಾಸೋದ್ಯಮ ಪ್ರಚಾರಕ್ಕಾಗಿ ದುರುಪಯೋಗ ಮಾಡಿದೆ ಎಂದು ಬಿಜೆಪಿ ನಾಯಕ ಮತ್ತು ಆರ್‌ಟಿಐ ಕಾರ್ಯಕರ್ತ ಅಜೇಂದ್ರ ಅಜಯ್ ಆರೋಪಿಸಿದ್ದಾರೆ.

ಈ ಕುರಿತು ಶನಿವಾರ ಮಾಹಿತಿ ಹಕ್ಕು ಕಾಯ್ದೆಯಡಿ ತಾವು ಪಡೆದ ದಾಖಲೆಗಳನ್ನು ಪ್ರಸ್ತುತ ಪಡಿಸಿದ ಅವರು, ‘ರಾಜ್ಯದಲ್ಲಿರುವ ಪ್ರವಾಸೋದ್ಯಮ ತಾಣಗಳ ಪ್ರಚಾರಕ್ಕಾಗಿ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಭಾಗವಹಿಸಿದ 60 ಸೆಕೆಂಡ್‌ನ ಆಡಿಯೊ-ವಿಡಿಯೊ ಕ್ಲಿಪ್‌ಗಾಗಿ ಕೈಲಾಸ ಎಂಟರ್‌ಟೈನ್‌ಮೆಂಟ್ ಪ್ರೈ.ಲಿಗೆ ವಿಪತ್ತು ಪರಿಹಾರದ ಧನದ 47.19ಲಕ್ಷ ಹಣವನ್ನು ರಾವತ್ ಸರ್ಕಾರ ಪಾವತಿ ಮಾಡಿದೆ’ ಎಂದು ಆರೋಪಿಸಿದ್ದಾರೆ. ಕೈಲಾಸ್ ಎಂಟರ್‌ಟೇನ್‌ಮೆಂಟ್‌ನಲ್ಲಿ ಗಾಯಕ ಕೈಲಾಶ್ ಖೇರ್ ಪಾಲುದಾರರು.

‘2013ರಲ್ಲಿ ಪ್ರವಾಹಕ್ಕೆ ತತ್ತರಿಸಿದ್ದ ಉತ್ತರಾಖಂಡ್ ಜನತೆಯ ಪುನರ್ವಸತಿಗಾಗಿ ನೀಡಲಾಗಿದ್ದ ಹಣವನ್ನು 2015ರಲ್ಲಿ ಪ್ರವಾಸ ತಾಣಗಳ ಪ್ರಚಾರಕ್ಕೆ ರಾವತ್ ಸರ್ಕಾರ ಬಳಕೆ ಮಾಡಿದೆ’ ಎಂದು ರಾವತ್ ವಿರುದ್ಧ ಅಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾವತ್ ಅವರ ಮಾಧ್ಯಮ ಸಲಹೆಗಾರ ಸುರೇದ್ರ ಕುಮಾರ್, ರಾಜ್ಯದ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಕೊಹ್ಲಿ ಅವರನ್ನು ಬಳಸಿಕೊಂಡ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಯಾವುದೇ ಅಕ್ರಮ ಎಸಗಿಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?
IPL 2026 RCB Full Squad: ಸತತ ಎರಡನೇ ಬಾರಿಗೆ ಕಪ್ ಗೆಲ್ಲಲು ಆರ್‌ಸಿಬಿ ಸಜ್ಜು! ಹರಾಜಿನ ಬಳಿಕ ತಂಡ ಹೀಗಿದೆ