
ಬೆಂಗಳೂರು(ಸೆ.24): ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಚೊಚ್ಚಲ ಟಿ20 ವಿಶ್ವಕಪ್'ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಎತ್ತಿಹಿಡಿದು ಇಂದಿಗೆ ಒಂಬತ್ತು ವರ್ಷಗಳಾಯ್ತು.
ಜೋಹಾನ್ಸ್'ಬರ್ಗ್'ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀ0 ಇಂಡಿಯಾ ಗೌತಮ್ ಗಂಭೀರ್ ಅವರ ಭರ್ಜರಿ ಅರ್ಧಶತಕ(75)ದ ನೆರವಿನಿಂದ 157 ರನ್ ಕಲೆಹಾಕಿತ್ತು.
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದ ಇಮ್ರಾನ್ ನಜೀರ್(33) ಅವರನ್ನು ರಾಬಿನ್ ಉತ್ತಪ್ಪ ರನೌಟ್ ಮಾಡಿ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ಆಡುತ್ತಿದ್ದ ಮಿಸ್ಬಾ-ಉಲ್ ಹಕ್ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸುವ ಹತ್ತಿರ ಬಂದು ಕೊನೆಕ್ಷಣದಲ್ಲಿ ವಿಫಲರಾದರು. ಕೊನೆಯ ಓವರ್'ನಲ್ಲಿ ಪಾಕ್ ಗೆಲ್ಲಲು 13 ರನ್'ಗಳ ಅವಶ್ಯಕತೆ ಇತ್ತು. ಇನ್ನು ಭಾರತ ವಿಶ್ವಕಪ್ ಎತ್ತಿಹಿಡಿಯಲು ಕೇವಲ ಒಂದು ವಿಕೆಟ್ ಬೇಕಾಗಿತ್ತು. ಅನನುಭವಿ ಆಟಗಾರ ಜೋಗಿಂದರ್ ಶರ್ಮಾ ಕೈಯಲ್ಲಿ ಬಾಲ್ ಇತ್ತು... ಮುಂದೆ ನಡೆದದ್ದು ಇತಿಹಾಸ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.