ಕೊಹ್ಲಿ ಆಡದಿದ್ದರೆ ಚೇಸಿಂಗ್`ನಲ್ಲಿ ಒದ್ದಾಡುವ ಟೀಮ್ ಇಂಡಿಯಾ

Published : Oct 27, 2016, 09:47 AM ISTUpdated : Apr 11, 2018, 01:08 PM IST
ಕೊಹ್ಲಿ ಆಡದಿದ್ದರೆ ಚೇಸಿಂಗ್`ನಲ್ಲಿ ಒದ್ದಾಡುವ ಟೀಮ್ ಇಂಡಿಯಾ

ಸಾರಾಂಶ

ಟೀಮ್​ ಇಂಡಿಯಾ ಚೇಸಿಂಗ್​ನಲ್ಲಿ ವಿಫಲವಾಗುತ್ತಿದೆ. ವಿರಾಟ್​ ಕೊಹ್ಲಿ ಪ್ರದರ್ಶನದ ಮೇಲೆಯೇ ಭಾರತ ತಂಡದ ಹಣೆಬರಹ ನಿರ್ಧಾರವಾಗುತ್ತಿದೆ. ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ಭಾರತ ಜಯಸಾಧಿಸಿದೆ. ಅವರಾಡದ ಎರಡು ಪಂದ್ಯಗಳಲ್ಲಿ ಭಾರತ ಕೈಯಲಲ್ಲಿದ್ದ ಪಂದ್ಯವನ್ನು ಸೋತಿದೆ.

ನವದೆಹಲಿ(ಅ.27): ಟೀಮ್​ ಇಂಡಿಯಾ ಚೇಸಿಂಗ್​ನಲ್ಲಿ ವಿಫಲವಾಗುತ್ತಿದೆ. ವಿರಾಟ್​ ಕೊಹ್ಲಿ ಪ್ರದರ್ಶನದ ಮೇಲೆಯೇ ಭಾರತ ತಂಡದ ಹಣೆಬರಹ ನಿರ್ಧಾರವಾಗುತ್ತಿದೆ. ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ಭಾರತ ಜಯಸಾಧಿಸಿದೆ. ಅವರಾಡದ ಎರಡು ಪಂದ್ಯಗಳಲ್ಲಿ ಭಾರತ ಕೈಯಲಲ್ಲಿದ್ದ ಪಂದ್ಯವನ್ನು ಸೋತಿದೆ.

ರೋಹಿತ್ ಶರ್ಮಾ ಸತತ ವೈಫಲ್ಯ: ಟೀಂ ಇಂಡಿಯಾದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಕಳೆದ 4 ಪಂದ್ಯಗಳಿಂದ ಸತತ ವೈಫಲ್ಯ ಅನುಭವಿಸಿದ್ದಾರೆ. ಉತ್ತಮ ಆರಂಭ ಒದಗಿಸಬೇಕಿದ್ದ ರೋಹಿತ್​ ಈ ಸರಣಿ ಪೂರ್ತಿ ಫ್ಲಾಪ್​ ಆಗಿದ್ದಾರೆ. 4 ಪಂದ್ಯಗಳಿಂದ ಅವರು ಕೇವಲ 53 ರನ್​ಗಳಿಸಿದ್ದು, ಭಾರತಕ್ಕೆ ಸಿಗಬೇಕಾದ ಆರಂಭ ದೊರಕಿಸಿಕೊಡುವಲ್ಲಿ  ಎಡವಿದ್ದಾರೆ.

ಹಾರ್ದಿಕ್​-ಮನೀಶ್​ ಫ್ಲಾಪ್:​ ಭಾರತ ತಂಡದಲ್ಲಿ ಹೆಚ್ಚು ಭರವಸೆ ಮೂಡಿಸಿರುವ ಆಟಗಾರರಾದ ಹಾರ್ದಿಕ್​ ಪಾಂಡ್ಯ ಮತ್ತು ಮನೀಶ್​ ಪಾಂಡೆ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ನೀಡುವಲ್ಲಿ  ವಿಫಲವಾಗಿದ್ದಾರೆ. ಮನೀಶ್​ 4 ಪಂದ್ಯಗಳಿಂದ 76 ರನ್​ಗಳಿಸಿದ್ರೆ, ಹಾರ್ದಿಕ್​ 4 ಪಂದ್ಯಗಳಿಂದ 45 ರನ್​ ಬಾರಿಸಿದ್ದಾರೆ ಅಷ್ಟೆ.

ಮಿಂಚದ ಜಾಧವ್​​-ರಹಾನೆ: ಇನ್ನೂ ಆರಂಭಿಕ ಅಜಿಂಕ್ಯಾ ರಹಾನೆ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುವಲ್ಲಿ ವಿಫಲವಾಗಿದ್ದಾರೆ. 4 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ದಾಖಲಿಸಿರುವ ರಹಾನೆ 123 ರನ್​ಗಳಿಸಿದ್ದಾರೆ. ಕೇದರ್​ ಜಾಧವ್​ 4 ಪಂದ್ಯಗಳಿಂದ 51 ರನ್​ಗಳಿಸಿದ್ದು, ಭಾರತಕ್ಕೆ ಸೂಕ್ತ ಸಮಯದಲ್ಲಿ  ಆಸರೆಯಾಗುವಲ್ಲಿ  ವಿಫಲವಾಗಿದ್ದಾರೆ.

ಬದಲಾದ ಧೋನಿ ಬ್ಯಾಟಿಂಗ್ ಕ್ರಮಾಂಕ: V/O: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್​ ಧೋನಿ 4ನೇ ಕ್ರಮಾಂಕದಲ್ಲಿ ಆಡುತ್ತಿರುವುದು ಕೆಳಕ್ರಮಾಂಕದ ಆಟಗಾರರ ಒತ್ತಡವನ್ನು ಹೆಚ್ಚಿಸಿದೆ. ಧೋನಿ ನಿಭಾಯಿಸುತ್ತಿದ್ದ ಉತ್ತಮ ಫಿನಿಶರ್​ ಸ್ಥಾನವನ್ನು ಕೆಳಗಿನ ಬ್ಯಾಟ್ಸ್​ಮನ್​​ಗಳಿಂದ ತುಂಬಲು ಸಾಧ್ಯವಾಗುತ್ತಿಲ್ಲ. ಧೋನಿ ಸ್ಥಾನ ತುಂಬುವುದೇ ಈಗ ಎಲ್ಲರಿಗೂ ಕಷ್ಟದ ಕೆಲಸವಾಗಿದೆ. ಅಕ್ಷರ್ ಪಟೇಲ್​ ಅಬ್ಬರಿಸಿದ್ರೂ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡುವಲ್ಲಿ ಫೇಲ್​ ಆಗಿದ್ದಾರೆ.

ವಿರಾಟ್​ ಕೊಹ್ಲಿ ಇಲ್ಲದೆ ಟೀಮ್ ಇಂಡಿಯಾ ಆಟಗಾರರು ಚೇಸಿಂಗ್​ ಮಾಡಲು ಅಸಾಧ್ಯವೇನೋ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಸುರೇಶ್​ ರೈನಾ, ಯುವರಾಜ್​ ಸಿಂಗ್​ರಂತಹ ಅನುಭವಿ ಫಿನಿಶರ್​ಗಳ ಕೊರತೆ ಕೂಡ ಭಾರತದ ತೆಲೆನೋವು ಹೆಚ್ಚಿಸಿದೆ. ಚೇಸಿಂಗ್ ವೇಳೆ ವಿರಾಟ್ ಮೇಲೆ ಭಾರತ ತಂಡ ಹೆಚ್ಚು ಅವಲಂಬಿತವಾಗುತ್ತಿರುವುದು ಭಾರತಕ್ಕೆ ಮಾರಕವಾಗುತ್ತಿದೆ. ಟೀಮ್ ಗೇಮ್​ನಲ್ಲಿ ಟೀಮ್​ ಆಗಿ ಆಡಿದ್ರೆ ಮಾತ್ರ ಗೆಲುವು ಎಂಬುದನ್ನು ಭಾರತ ಮರೆತಂತಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ
ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!