
ಕೊಲ್ಕತ್ತಾ(ಅ.03): ಬ್ಯಾಟ್ - ಬಾಲ್ ಹಿಡಿಯುವ ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದ ಟೀಮ್ ಇಂಡಿಯಾ ಆಟಗಾರರು ಸ್ವಚ್ಛ ಭಾರತ ಅಭಿಯಾನದ ಹಿನ್ನಲೆಯಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನವನ್ನು ಸ್ವಚ್ಚಗೊಳಿಸಿದರು.
ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ನಾಯಕ ಕ್ಯಾಪ್ಟನ್ ಕೊಹ್ಲಿ ಅವರ ಸಾರಥ್ಯದಲ್ಲಿ ಸಂಪೂರ್ಣ ತಂಡ ಮೈದಾನಕ್ಕಿಳಿದು ಸಂಪೂರ್ಣ ಮೈದಾನವನ್ನು ಸ್ವಚ್ಚಗೊಳಿಸಿದರು.
ಭಾರತ-ನ್ಯೂಜಿಲೆಂಡ್ ಟೆಸ್ಟ್ ಮೂರನೇ ದಿನದಾಟ ಮುಗಿದ ನಂತರ, ಟೀಮ್ ಇಂಡಿಯಾ ಆಟಗಾರರು ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದು. ಮೈದಾನವನ್ನು ಸ್ವಚ್ಚಗೊಳಿಸಲು ಮುಂದಾದರು.
ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನಕ್ಕೆ ಸಂಪೂರ್ಣ ಬೆಂಬಲು ನೀಡುವ ಜೊತೆಗೆ, ಭಾರತವನ್ನು ಸ್ವಚ್ಚವಾಗಿಡುವ ಸಂದೇಶ ರವಾನಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.