
ಹೈದರಾಬಾದ್(ಮಾ.21): ಕಳೆದೆರಡು ತಿಂಗಳಿನಿಂದ ಸಂಬಳ ಸಿಗದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸಿಬ್ಬಂದಿಯನ್ನೂ ಒಳಗೊಂಡು ನೂರಿಪ್ಪತ್ತು ಮಂದಿ ಮಾರ್ಚ್ ಮೊದಲ ವಾರದಿಂದಲೇ ಮುಷ್ಕರ ಹೂಡಿದ್ದು, ಈ ಸಂಬಂಧ ಬಿಸಿಸಿಐಗೆ ಪತ್ರ ಬರೆದಿದ್ದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಋತುವಿನ ಐಪಿಎಲ್ ಪಂದ್ಯಗಳು ಹೈದರಾಬಾದ್ನಿಂದ ರಾಯ್ಪುರಕ್ಕೆ ಸ್ಥಳಾಂತರಗೊಳ್ಳುವ ಸಂಭವವಿದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್ಸಿಎ) ಕಾರ್ಯದರ್ಶಿ ಜಾನ್ ಮನೋಜ್ ತಿಳಿಸಿದ್ದಾರೆ.
ಬಿಸಿಸಿಐ ವೀಕ್ಷಕರಾದ ರತ್ನಾಕರ್ ಶೆಟ್ಟಿಯವರ ಪ್ರಕಾರ ಭಾರತ-ಬಾಂಗ್ಲಾದೇಶ ನಡುವಿನ ಏಕೈಕ ಟೆಸ್ಟ್ ಪಂದ್ಯದಿಂದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಸುಮಾರು 44 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಏಪ್ರಿಲ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯವಲ್ಲದೆ, ಮೇ 21ರ ಫೈನಲ್ ಸೇರಿದಂತೆ ಒಟ್ಟು 8 ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ ಹೊತ್ತಿದೆ.
2010ರಲ್ಲೂ ಕೂಡ ತೆಲಂಗಾಣ ಹೋರಾಟದಿಂದಾಗಿ ಹೈದರಾಬಾದ್'ನಲ್ಲಿ ನಡೆಯಬೇಕಿದ್ದ ಪಂದ್ಯಗಳು ಮುಂಬೈ ಹಾಗೂ ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.