
ಲಖನೌ(ನ.13): ಭಾರತ ಕ್ರಿಕೆಟ್ ತಂಡದ ಯುವ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೆಲ ವರ್ಷಗಳ ಹಿಂದೆ ತಾವು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.ಕುಲ್ದೀಪ್ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದೆ.
ಇಲ್ಲಿ ನಡೆದ ಹಿಂದುಸ್ಥಾನ್ ಶಿಖರ್ ಸಂಗಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲ್ದೀಪ್ ‘ಉತ್ತರ ಪ್ರದೇಶ ಅಂಡರ್-15 ತಂಡದಿಂದ ನನ್ನನ್ನು ಏಕಾಏಕಿ ಕೈಬಿಡಲಾಗಿತ್ತು. ಆಯ್ಕೆಗಾಗಿ ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೆ. ಆದರೆ ನಾನು ಆಯ್ಕೆಯಾಗದಿದ್ದಾಗ, ಆ ಬೇಸರವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿಗುಪ್ಸೆಗೆ ಒಳಗಾದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆಯುತ್ತವೆ’ ಎಂದು ಆಘಾತಕಾರಿ ಘಟನೆಯನ್ನು ಬಿಚ್ಚಿಟ್ಟರು.
‘ಶಾಲೆಯಲ್ಲಿ ನಾನು ಅಗ್ರ ಶ್ರೇಯಾಂಕ ಪಡೆದುಯುತ್ತಿದ್ದ ವಿದ್ಯಾರ್ಥಿಯಾಗಿದ್ದೆ. ನನ್ನ ತಂದೆ ಒತ್ತಾಯಿಸಿದ್ದರಿಂದ ಕ್ರಿಕೆಟ್ ಆಡಲು ಆರಂಭಿಸಿದೆ. ವೇಗದ ಬೌಲರ್ ಆಗಬೇಕು ಎಂದು ನನಗೆ ಆಸೆಯಿತ್ತು, ನನ್ನ ಕೋಚ್ ಸ್ಪಿನ್ನರ್ ಆಗಲು ಸಲಹೆ ನೀಡಿದರು. ಕೆಲ ಘಟನೆಗಳು ನಮ್ಮ ಜೀವನವನ್ನೇ ಬದಲಿಸಲಿವೆ’ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದ ಕುಲ್ದೀಪ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಸೀಮಿತ ಓವರ್'ಗಳ ಕ್ರಿಕೆಟ್'ನಲ್ಲೂ ಕುಲ್ದೀಪ್ ಸಾಕಷ್ಟು ಮಿಂಚು ಹರಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.