
ಮ್ಯಾಡ್ರಿಡ್(ಏ.02): ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು ಸಿಂಗಾಪುರದ ಯಿಯೊ ಜಿಯಾ ಮಿನ್ ವಿರುದ್ಧ 24-22, 22-20 ನೇರ ಗೇಮ್ಗಳಲ್ಲಿ ಜಯಗಳಿಸಿ ಪ್ರಶಸ್ತಿ ಸುತ್ತಿಗೇರಿದರು. ಮೊದಲ ಗೇಮ್ನಲ್ಲಿ 15-20ರಿಂದ ಹಿಂದಿದ್ದ ಸಿಂಧು 20-20ರಲ್ಲಿ ಸಮಬಲ ಸಾಧಿಸಿ ಬಳಿಕ 24-22ರಲ್ಲಿ ಗೇಮ್ ಜಯಿಸಿದರು. 2ನೇ ಗೇಮ್ನಲ್ಲೂ ರೋಚಕ ಪೈಪೋಟಿ ನಡೆಸಿ ಮೇಲುಗೈ ಸಾಧಿಸಿದರು. ಫೈನಲ್ನಲ್ಲಿ ಅವರು ಸ್ಪೇನ್ನ ಕ್ಯಾರೊಲಿನಾ ಮರೀನ್ ಅಥವಾ ಇಂಡೋನೇಷ್ಯಾದ ಜಾರ್ಜಿಯಾ ಮರಿಷ್ಕಾ ತುಂಜುಂಗ್ ವಿರುದ್ಧ ಸೆಣಸಾಡಲಿದ್ದು, ಭಾರತಕ್ಕೆ ಟೂರ್ನಿಯಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.
ಐಎಸ್ಎಲ್: ಕೇರಳ ಬ್ಲಾಸ್ಟರ್ಗೆ ಎಐಎಫ್ಎಫ್ 4 ಕೋಟಿ ರುಪಾಯಿ ದಂಡ!
ನವದೆಹಲಿ: ಬೆಂಗಳೂರು ಎಫ್ಸಿ ವಿರುದ್ಧದ ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದ ಕೇರಳ ಬ್ಲಾಸ್ಟರ್ ತಂಡಕ್ಕೆ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಶಿಸ್ತು ಸಮಿತಿ 4 ಕೋಟಿ ರುಪಾಯಿ ದಂಡ ವಿಧಿಸಿದೆ. ಜೊತೆಗೆ 10 ದಿನಗಳ ಒಳಗೆ ಬಹಿರಂಗ ಕ್ಷಮೆಯಾಚಿಸುವಂತೆ ತಂಡಕ್ಕೆ ಆದೇಶಿಸಿರುವ ಎಐಎಫ್ಎಫ್, ಆದೇಶ ಉಲ್ಲಂಘಿಸಿದರೆ 6 ಕೋಟಿ ರು. ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇನ್ನು ಇದಷ್ಟೇ ಅಲ್ಲದೇ ಕೋಚ್ ಇವಾನ್ ವುಕೊಮನೋವಿಚ್ರನ್ನು ಎಐಎಫ್ಎಫ್ ಆಯೋಜಿಸುವ 10 ಪಂದ್ಯಗಳಿಂದ ಅಮಾನತು ಮಾಡಿದ್ದು, 5 ಲಕ್ಷ ರು. ದಂಡ ಪಾವತಿಸಲು ಸೂಚಿಸಿ ಬಹಿರಂಗ ಕ್ಷಮೆಯಾಚನೆಗೂ ಆದೇಶಿಸಿದೆ. ಆದರೆ ಶಿಸ್ತು ಸಮಿತಿಯ ಆದೇಶದ ವಿರುದ್ಧ ಬ್ಲಾಸ್ಟರ್ಸ್ ಎಐಎಫ್ಎಫ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
Indian Super League: ಕೇರಳ ಬ್ಲಾಸ್ಟರ್ಸ್ ತಂಡಕ್ಕೆ 2 ವರ್ಷ ನಿಷೇಧ ಶಿಕ್ಷೆ?
ಏನಾಗಿತ್ತು?: ಮಾರ್ಚ್ 3ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿಯ ಸುನಿಲ್ ಚೆಟ್ರಿ ಬಾರಿಸಿದ ಫ್ರೀ ಕಿಕ್ ಗೋಲನ್ನು ವಿರೋಧಿಸಿ ಕೇರಳ ಆಟಗಾರರು ಅರ್ಧದಲ್ಲೇ ಆಟ ನಿಲ್ಲಿಸಿ ಮೈದಾನ ತೊರೆದಿದ್ದರು. ಹೀಗಾಗಿ ಬಿಎಫ್ಸಿ ಸೆಮಿಫೈನಲ್ಗೇರಿತ್ತು.
ಮೈಸೂರು ಓಪನ್ ಟೆನಿಸ್: ಸೆಮೀಸಲ್ಲಿ ಪ್ರಜ್ವಲ್ಗೆ ಸೋಲು
ಮೈಸೂರು: ಇಲ್ಲಿ ನಡೆಯುತ್ತಿರುವ ಮೈಸೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ವಲ್ ದೇವ್ ಸೆಮಿಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಶನಿವಾರ ನಡೆದ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ವಿಶ್ವ ರಾರಯಂಕಿಂಗ್ನಲ್ಲಿ 1027ನೇ ಸ್ಥಾನದಲ್ಲಿರುವ ಮೈಸೂರಿನ ಪ್ರಜ್ವಲ್ ಬ್ರಿಟನ್ನ ಜಾಜ್ರ್ ಲೋಫಾಜೆನ್ ವಿರುದ್ಧ 5-7, 4-6 ನೇರ ಸೆಟ್ಗಳಲ್ಲಿ ಪರಾಭಭವಗೊಂಡರು. ಭಾನುವಾರ ಫೈನಲ್ನಲ್ಲಿ ಲೋಫಾಜೆನ್ ಆಸ್ಪ್ರೇಲಿಯಾದ ಬ್ಲೇಕ್ ಎಲ್ಲಿಸ್ ವಿರುದ್ಧ ಸೆಣಸಾಡಲಿದ್ದಾರೆ. ಸೆಮೀಸ್ನಲ್ಲಿ ಎಲ್ಲಿಸ್ ಅಮೆರಿಕದ ಓಲಿವರ್ ಕ್ರಾಫರ್ಡ್ ವಿರುದ್ಧ 7-5, 6-3 ಅಂತರದಲ್ಲಿ ಜಯಗಳಿಸಿದರು.
ಇದೇ ವೇಳೆ ಭಾರತದ ಶಶಿಕುಮಾರ್ ಮುಕುಂದ್-ವಿಷ್ಣುವರ್ಧನ್ ಜೋಡಿ ಡಬಲ್ಸ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಜೋಡಿ ಶನಿವಾರ ಫೈನಲ್ನಲ್ಲಿ ಭಾರತದವರೇ ಆದ ನಿಕ್ಕಿ ಪೂನಚ್ಚ-ರಿತ್ವಿಕ್ ಚೌಧರಿ ವಿರುದ್ಧ 6-3, 6-4 ನೇರ ಸೆಟ್ಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.