
ಕೊಲಂಬೊ(ಮಾ.21): ಮೊನ್ನೆಯಷ್ಟೇ ಮುಕ್ತಾಯಗೊಂಡ ತ್ರಿಕೋನ ಟಿ20 ಸರಣಿಯ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಶುಕ್ರವಾರ ನಡೆದಿದ್ದ ಪಂದ್ಯದ ವೇಳೆ ಓವರ್ನಲ್ಲಿ 2ನೇ ಬೌನ್ಸರ್ ವಿಚಾರವಾಗಿ, ಬಾಂಗ್ಲಾ-ಲಂಕಾ ಆಟಗಾರರು ಕಿತ್ತಾಡಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಬಾಂಗ್ಲಾ ಆಟಗಾರನೊಬ್ಬ ಡ್ರೆಸ್ಸಿಂಗ್ ಕೊಠಡಿಯ ಬಾಗಿಲಿನ ಗಾಜು ಒಡೆದು ಹಾಕಿದ್ದ ಎಂದು ವರದಿಯಾಗಿತ್ತು.
ಆದರೆ ಆ ಆಟಗಾರ ಯಾರು ಎನ್ನುವುದು ಬಹಿರಂಗಗೊಂಡಿರಲಿಲ್ಲ. ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಡ್ರೆಸ್ಸಿಂಗ್ ಕೊಠಡಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ, ಆ ಆಟಗಾರ ಬಾಂಗ್ಲಾ ನಾಯಕ ಶಕೀಬ್-ಅಲ್-ಹಸನ್ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.