ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ರಾಜಸ್ಥಾನ ರಾಯಲ್ಸ್

Published : May 11, 2018, 04:05 PM ISTUpdated : May 11, 2018, 04:10 PM IST
ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ರಾಜಸ್ಥಾನ ರಾಯಲ್ಸ್

ಸಾರಾಂಶ

ರಾಜಸ್ಥಾನ ಸರ್ಕಾರ, ನ್ಯಾಷನಲ್ ಕ್ಯಾನ್ಸರ್ ಗ್ರಿಡ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ’ಕ್ಯಾನ್ಸರ್ ಮುಕ್ತ’ ಅಭಿಯಾನಕ್ಕೆ ಕೈಜೋಡಿಸಿರುವ ರಾಜಸ್ಥಾನ ರಾಯಲ್ಸ್ ತಂಡ, ಇಂದು ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ.

ಜೈಪುರ[ಮೇ.11]: ಪ್ಲೇ ಆಫ್ ಹಂತ ಪ್ರವೇಶಿಸಲು ಕಸರತ್ತು ನಡೆಸುತ್ತಿರುವ ರಾಜಸ್ಥಾನ ರಾಯಲ್ಸ್ ಇಂದು ಬಲಿಷ್ಠ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಎದುರಿಸಲಿದ್ದು, ಗುಲಾಬಿ[ಪಿಂಕ್] ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.
ರಾಜಸ್ಥಾನ ಸರ್ಕಾರ, ನ್ಯಾಷನಲ್ ಕ್ಯಾನ್ಸರ್ ಗ್ರಿಡ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ’ಕ್ಯಾನ್ಸರ್ ಮುಕ್ತ’ ಅಭಿಯಾನಕ್ಕೆ ಕೈಜೋಡಿಸಿರುವ ರಾಜಸ್ಥಾನ ರಾಯಲ್ಸ್ ತಂಡ, ಇಂದು ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ. ಇದರ ಅಂಗವಾಗಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ಹೆನ್ರಿಚ್ ಕ್ಲಸೇನ್, ಕೃಷ್ಣಪ್ಪ ಗೌತಮ್ ಹಾಗೂ ಮಹಿಪಾಲ್ ಲೋಮ್ರರ್ ಪಿಂಕ್ ಜರ್ಸಿ ಅನಾವರಣಗೊಳಿಸಿದರು.

ಜೆರ್ಸಿ ಅನಾವರಣಗೊಳಿಸಿ ಮಾತನಾಡಿದ ರಹಾನೆ, ’ಇದು ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯ ಮೀರಿ ಜಾಗೃತಿ ಮೂಡಿಸುತ್ತೇವೆಂದು’ ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ಪಿಂಕ್ ಜರ್ಸಿಯು ಆಕಾಶ ನೀಲಿ ಹಾಗೂ ಕಂದು ಬಣ್ಣವನ್ನು ಒಳಗೊಂಡಿದ್ದು, ಪಿಂಕ್ - ಬ್ರೆಸ್ಟ್ ಕ್ಯಾನ್ಸರ್, ನೀಲಿ- ಗರ್ಭನಾಳದ ಕ್ಯಾನ್ಸರ್ ಹಾಗೂ ಕಂದು- ಬಾಯಿ ಕ್ಯಾನ್ಸರ್ ಸೂಚಿಸುತ್ತದೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀನಿಯರ್ ತಂಡಕ್ಕೆ ಸೆಲೆಕ್ಟ್ ಆದ್ರೂ ಹುಡುಗಾಟಿಕೆ ಬಿಡದ 'ವೈಭವ್ ಸೂರ್ಯವಂಶಿ'! ಟೀಂ ಇಂಡಿಯಾ ಅಭಿಷೇಕ್, ಅಕ್ಷರ್ ಶಾಕ್!
'ವೈಭವ್‌ ಸೂರ್ಯವಂಶಿ ಭವಿಷ್ಯ ಹಾಳು ಮಾಡಬೇಡಿ': ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಆರ್‌ಸಿಬಿ ಆಪತ್ಬಾಂಧವ..!