
ಜಮ್ಮು-ಕಾಶ್ಮೀರ(ನ.25): ರಣಜಿ ಟೂರ್ನಿಯಲ್ಲಿ ಜಮ್ಮ ಮತ್ತು ಕಾಶ್ಮೀರ ತಂಡ ಮೊದಲ ಗೆಲುವು ದಾಖಲಿಸಿದೆ. ತ್ರಿಪುರ ವಿರುದ್ಧ ಗೆಲುವಿನ ನಗೆ ಬೀರಿದ ಜಮ್ಮ ತಂಡ ಸಂತಸ ಅಲೆಯಲ್ಲಿದೆ. ಗೆಲುವಿಗಾಗಿ ಪರಿತಪಿಸುತ್ತಿದ್ದ ಜಮ್ಮ ಇದೀಗ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದೆ.
ಜಮ್ಮು ಮತ್ತು ಕಾಶ್ಮೀರ ತಂಡದ ಈ ಯಶಸ್ಸಿಗೆ ಕಾರಣ ತಂಡದ ಮೆಂಟರ್ ಹಾಗೂ ಆಟಗಾರ ಇರ್ಫಾನ್ ಪಠಾಣ್ ಅನ್ನೋದರಲ್ಲಿ ಎರಡು ಮಾತಿಲ್ಲ. ಗೆಲುವಿನ ಬಳಿಕ ಮಾತನಾಡಿದ ಇರ್ಫಾನ್, ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ನಾನು ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿರುವವರೆಗೂ ಇಲ್ಲಿ ಮೀಸಲಾತಿ ಪದ್ದತಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಕೋಟಾ ಪದ್ದತಿಯಿಂದ ನಿಜವಾದ ಪ್ರತಿಭೆಗೆ ಅವಕಾಶ ಸಿಗಿವುದಿಲ್ಲ. ಇಷ್ಟೇ ಅಲ್ಲ, ಇದರಿಂದ ತಂಡ ಬಲಿಷ್ಠವಾಗುವುದಿಲ್ಲ. ಹೀಗಾಗಿ ಕೋಟಾ ಪದ್ದತಿ ಇಲ್ಲಿರುವುದಿಲ್ಲ. ಅತ್ಯುತ್ತಮ ಪ್ರದರ್ಶನ, ಕಠಿಣ ಅಭ್ಯಾಸ, ಶಿಸ್ತು ಇವೇ ಮುಖ್ಯ ಎಂದು ಇರ್ಫಾನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.