ಪ್ರೊ ಕಬಡ್ಡಿ: ಮುಂಬೈ ತಂಡದಲ್ಲೇ ಉಳಿದ ಅನೂಪ್

Published : May 15, 2017, 05:44 PM ISTUpdated : Apr 11, 2018, 01:11 PM IST
ಪ್ರೊ ಕಬಡ್ಡಿ: ಮುಂಬೈ ತಂಡದಲ್ಲೇ ಉಳಿದ ಅನೂಪ್

ಸಾರಾಂಶ

ಬೋನಸ್ ಕಾ ಬಾದ್'ಷಾ ಎಂದೇ ಕರೆಸಿಕೊಳ್ಳುವ ಅನೂಪ್ ಕುಮಾರ್ ಅವರನ್ನು ಯು ಮುಂಬಾ ತನ್ನ ತಂಡದಲ್ಲಿ ಉಳಿಸಿಕೊಂಡಿದೆ

ಮುಂಬೈ(ಮೇ.15): ಮುಂಬರುವ ಜುಲೈ ತಿಂಗಳಿಂದ ಆರಂಭವಾಗಲಿರುವ 5ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಸದ್ಯ ಈಗೀರುವ 8 ತಂಡಗಳ ಪೈಕಿ 7 ತಂಡಗಳು ತಲಾ ಒಬ್ಬ ಆಟಗಾರನನ್ನು ತಮ್ಮ ತಂಡದಲ್ಲೇ ಉಳಿಸಿಕೊಂಡಿದ್ದಾರೆ.

ಇದೇ 22 ಮತ್ತು 23 ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 350ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಈ ಆವೃತ್ತಿಯಿಂದ ಹೊಸ 4 ತಂಡಗಳು ಸೇರ್ಪಡೆಗೊಳ್ಳುತ್ತಿವೆ.

ತಮ್ಮ ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಇಂತಿದೆ:

ಪಾಟ್ನಾ ಪೈರೇಟ್ಸ್ : ಕಳೆದ ಆವೃತ್ತಿಯ ಚಾಂಪಿಯನ್ ತಂಡವು 'ಡುಬ್ಕಿ ಕಿಂಗ್' ಅಂತಲೇ ಪ್ರಸಿದ್ಧರಾದ ಸ್ಟಾರ್ ಆಟಗಾರ  ಪ್ರದೀಪ್ ನರ್ವಾಲ್ ಅವರನ್ನು ಉಳಿಸಿಕೊಂಡಿದ್ದಾರೆ.

ತೆಲಗು ಟೈಟಾನ್ಸ್ : ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ತಂದ ದಾಖಲೆ ನಿರ್ಮಿಸಿರುವ ನಾಯಕ ರಾಹುಲ್ ಚೌಧರಿಯನ್ನು ಉಳಿಸಿಕೊಳ್ಳಲಾಗಿದೆ. ಮೂರು ವರ್ಷದಿಂದಲೂ ರಾಹುಲ್ ತೆಲಗು ಟೈಟಾನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್: ಯುವ ಆಟಗಾರ ರಾಜೇಶ್ ನರ್ವಾಲ್, ಅಮಿತ್ ಹೂಡಾ, ಅನುಭವಿ ಆಟಗಾರ ಜಸ್ವೀರ್ ಸಿಂಗ್, ಶಬ್ಬೀರ್ ಬಾಪು ಅವರಂತಹ ಆಟಗಾರಿದ್ದರೂ ಜೈಪುರ ತಂಡ ಯಾವುದೇ ಆಟಗಾರರನ್ನು ಉಳಿಸಿಕೊಂಡಿಲ್ಲ.

ಪುಣೇರಿ ಪಲ್ಟನ್ಸ್ : ಪುಣೇರಿ ಪಲ್ಟನ್ ತಂಡ ಈ ಬಾರಿ ವಿಶ್ವಕಪ್ ವಿಜೇತ ತಂಡದ ಹೀರೋಗಳಾದ ಮನ್ಜೀತ್ ಚಿಲ್ಲರ್ ಇಲ್ಲವೇ ಅಜಯ್ ಠಾಕೂರ್ ಅವರನ್ನು ಉಳಿಸಿಕೊಂಡಿಲ್ಲ. ಬದಲಾಗಿ ದೀಪಕ್ ನಿವಾಸ್ ಹೂಡಾ ಅವರನ್ನು ತಂಡದಲ್ಲಿ ರೀಟೈನ್ ಮಾಡಿದೆ.

ಯು ಮುಂಬಾ: ಬೋನಸ್ ಕಾ ಬಾದ್'ಷಾ ಎಂದೇ ಕರೆಸಿಕೊಳ್ಳುವ ಅನೂಪ್ ಕುಮಾರ್ ಅವರನ್ನು ಯು ಮುಂಬಾ ತನ್ನ ತಂಡದಲ್ಲಿ ಉಳಿಸಿಕೊಂಡಿದೆ

ಬೆಂಗಳೂರು ಬುಲ್ಸ್ : ಈ ಬಾರಿ ಬೆಂಗಳೂರು ಬುಲ್ಸ್ ರಿಟೈನ್ ಮಾಡಿದ ಆಟಗಾರ ಹೆಸರು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಬಾರಿ ಮೋಹಿತ್ ಚಿಲ್ಲರ್ ಅವರನ್ನು ಕೈಬಿಟ್ಟು ಯುವ ಆಟಗಾರ ಆಶೀಶ್ ಸಾಂಗ್ವಾನ್ ಅವರನ್ನು ರೀಟೈನ್ ಮಾಡಿದೆ.

ದಬಾಂಗ್ ಡೆಲ್ಲಿ: ಕೇವಲ ಎರಡು ತಂಡಗಳು ಮಾತ್ರ ವಿದೇಶಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅದರಲ್ಲಿ ಡೆಲ್ಲಿ ತಂಡವೂ ಒಂದು. ಕಳೆದ ಆವೃತ್ತಿಯಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಮಿರಾಜ್ ಶೇಖ್ ಅವರನ್ನು ಉಳಿಸಿಕೊಂಡಿದೆ. ಕಾಶಿಲಿಂಗ್ ಅಡಿಕೆ ಅವರನ್ನು ಕೈಬಿಟ್ಟಿದ್ದು ಆಶ್ಚರ್ಯ ಮೂಡಿಸಿದ್ದಂತೂ ಸುಳ್ಳಲ್ಲ.

ಬೆಂಗಾಲ್ ವಾರಿಯರ್ಸ್: ಕೋರಿಯಾದ ಸ್ಟಾರ್ ಆಟಗಾರ ಜಾಂಗ್ ಕುನ್ ಲೀ ಕಳೆದ ಆವೃತ್ತಿಯಲ್ಲಿ ರೈಡಿಂಗ್'ನಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಹಾಗಾಗಿ ಬೆಂಗಾಲ್ ವಾರಿಯರ್ಸ್ ತಂಡ ತನ್ನಲ್ಲೇ ಉಳಿಸಿಕೊಂಡಿದೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ತಂಡದಲ್ಲಿ ಸಂಚಲನ: ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?