ಪ್ರೊ ಕಬಡ್ಡಿ 2018: ಬೆಂಗಾಲ್ ಆರ್ಭಟಕ್ಕೆ ತಲೆಬಾಗಿದ ತಮಿಳ್ ತಲೈವಾಸ್!

Published : Oct 11, 2018, 10:50 PM IST
ಪ್ರೊ ಕಬಡ್ಡಿ 2018: ಬೆಂಗಾಲ್ ಆರ್ಭಟಕ್ಕೆ ತಲೆಬಾಗಿದ ತಮಿಳ್ ತಲೈವಾಸ್!

ಸಾರಾಂಶ

ಚೆನ್ನೈನಲ್ಲಿ ನಡೆದ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಹೋರಾಟದಲ್ಲಿ ತವರಿನ ತಂಡ ಹಿನ್ನಡೆ ಅನುಭವಿಸಿದೆ. ಬೆಂಗಾಲ್ ತಂಡದ ಆಲ್ರೌಂಡರ್ ಪ್ರದರ್ಶನಕ್ಕೆ ತಲೈವಾಸ್ ತಲೆಬಾಗಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್

ಚೆನ್ನೈ(ಅ.11): ಯುಪಿ ಯೋಧಾ ಹಾಗೂ ಪಾಟ್ನಾ ಪೈರೇಟ್ಸ್ ಪಂದ್ಯದ ಬಳಿಕ  ನಡೆದ ಮತ್ತೊಂದು ರೋಚಕ ಹೋರಾಟದಲ್ಲಿ ಬೆಂಗಾಲ್ ವಾರಿಯರ್ಸ್ ಗೆಲುವಿ ನಗೆ ಬೀರಿದೆ. ತಮಿಳ್ ತಲೈವಾಸ್ ವಿರುದ್ಧ ಹೋರಾಡಿದ ಬೆಂಗಾಲ್ 36-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಮೊದಲಾರ್ಧ ಆರಂಭಗೊಳ್ಳುತ್ತಿದ್ದಂತೆ ತಮಿಳ್ ತಲೈವಾಸ್ ತಂಡದ ಜಸ್ವೀರ್ ಸಿಂಗ್ ಅಂಕ ಖಾತೆ ಆರಂಭಿಸಿದರು. ಇಷ್ಟೇ ಅಲ್ಲ ಜಸ್ವೀರ್ ಅದ್ಬುತ ರೈಡ್‌ನಿಂದ ಆರಂಭದಲ್ಲಿ 7-5 ಅಂಕಗಳ ಮುನ್ನಡೆ ಪಡೆದುಕೊಂಡಿತು. ಆದರೆ ಬೆಂಗಾಲ್ ಅಷ್ಟೇ ವೇಗದಲ್ಲಿ ಕಮ್‌ಬ್ಯಾಕ್ ಮಾಡಿತು. 

ಮೊದಲಾರ್ಧದ ಅಂತ್ಯದಲ್ಲಿ ಬೆಂಗಾಲ್ 18-15 ಅಂಕಗಳ ಅಂತರದ ಮುನ್ನಡೆ ಸಾಧಿಸಿತು. ಇನ್ನು ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ಮುನ್ನಡೆಗಾಗಿ ಹೋರಾಟ ನಡೆಸಿತು. ಆದರೆ ಸಾಧ್ಯವಾಗಲಿಲ್ಲ. ಬೆಂಗಾಲ್ ತಂಡದ ಮನೀಂದರ್ ಸಿಂಗ್ ಒಟ್ಟು 9 ರೈಡ್ ಪಾಯಿಂಟ್ಸ್ ಗಳಿಸೋ ಮೂಲಕ ತಂಡದ ಮುುನ್ನಡೆ ಅಂತರ ಹೆಚ್ಚಿಸಿದರು.

ಪಂದ್ಯ ಮುಕ್ತಾಯದ ವೇಳೆಗೆ ಬೆಂಗಾಲ್ ವಾರಿಯರ್ಸ್ 36-27 ಅಂತರದ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ತಮಿಳ್ ತಲೈವಾಸ್ ತವರಿನಲ್ಲಿ ಗೆಲುವು ಸಾಧಿಸಿದ  ಬೆಂಗಾಲ್ ಗೆಲುವಿನ ಕೇಕೇ ಹಾಕಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!
ಕಡಿಮೆ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಜಾರಿದ ಸ್ಟಾರ್ ಆಲ್ರೌಂಡರ್! ಹಾಲಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಜಾಕ್‌ಪಾಟ್