ಪ್ಯಾರಾಲಿಂಪಿಯನ್ ತಂಗವೇಲು ಮರಿಯಪ್ಪನ್ ವಿರುದ್ಧ ಕೊಲೆ ಆರೋಪ

By Suvarna Web DeskFirst Published Oct 12, 2017, 10:10 PM IST
Highlights

ಕಳೆದ ಜೂನ್ 3 ರಂದು ಕ್ಲೀನರ್ ಆಗಿದ್ದ ಸತೀಶ್ ಕುಮಾರ್ ಬೈಕ್‌'ನಲ್ಲಿ ಹೋಗುವಾಗ, ಮರಿಯಪ್ಪನ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸತೀಶ್ ಹಾಗೂ ಮರಿಯಪ್ಪನ್ ನಡುವೆ ವಾಗ್ವಾದ ನಡೆದಿತ್ತು. ಮರಿಯಪ್ಪನ್ ಹಾಗೂ ಆತನ ಸಹಚರರು ಸತೀಶ್ ಮೇಲೆ ಹಲ್ಲೆ ಕೂಡ ನಡೆಸಿದ್ದರು.

ಚೆನ್ನೈ(ಅ.12): ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ವಿರುದ್ಧ ಕೊಲೆ ಆರೋಪ ಕೇಳಿ ಬಂದಿದ್ದು, ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದಲ್ಲಿ ಮರಿಯಪ್ಪನ್‌'ರನ್ನು ಪ್ರತಿವಾದಿಯನ್ನಾಗಿಸಿ ಅ.24ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ. ಕಳೆದ ಜೂನ್ 3 ರಂದು ಕ್ಲೀನರ್ ಆಗಿದ್ದ ಸತೀಶ್ ಕುಮಾರ್ ಬೈಕ್‌'ನಲ್ಲಿ ಹೋಗುವಾಗ, ಮರಿಯಪ್ಪನ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸತೀಶ್ ಹಾಗೂ ಮರಿಯಪ್ಪನ್ ನಡುವೆ ವಾಗ್ವಾದ ನಡೆದಿತ್ತು. ಮರಿಯಪ್ಪನ್ ಹಾಗೂ ಆತನ ಸಹಚರರು ಸತೀಶ್ ಮೇಲೆ ಹಲ್ಲೆ ಕೂಡ ನಡೆಸಿದ್ದರು.

ಇದಾದ ಬಳಿಕ ನಾಪತ್ತೆಯಾಗಿದ್ದ ಸತೀಶ್, ರೈಲ್ವೆ ಟ್ರ್ಯಾಕ್‌'ವೊಂದರ ಬಳಿ ಶವವಾಗಿ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮಗನ ಸಾವಿಗೆ ಮರಿಯಪ್ಪನ್ ಕಾರಣ ಎಂದು ಆರೋಪಿಸಿ ಮೃತನ ಪೋಷಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

click me!