ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ

Published : Mar 18, 2018, 09:00 PM ISTUpdated : Apr 11, 2018, 12:47 PM IST
ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ

ಸಾರಾಂಶ

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಶಬ್ಬೀರ್ ಕೇವಲ 50 ಎಸೆತಗಳಲ್ಲಿ 77 ರನ್ ಸಿಡಿಸಿ ಉನಾದ್ಕತ್'ಗೆ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ನಿರಂತರ ವಿಕೆಟ್ ಕಳೆದುಕೊಂಡ ಬಾಂಗ್ಲಾ ಅಂತಿಮವಾಗಿ 166 ರನ್'ಗಳಿಸಿತು.

ಕೊಲಂಬೊ(ಮಾ.18): ಟೀಂ ಇಂಡಿಯಾ ನಿದಾಸ್ ಟ್ರೋಫಿ ಗೆಲ್ಲಲು 167 ರನ್'ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್'ಗೆ ಮುಂದಾಯಿತು. 3.1 ಓವರ್'ನಲ್ಲಿ ಬಾಂಗ್ಲಾ ಆರಂಭಿಕರು 27 ರನ್ ಕಲೆಹಾಕಿದ್ದರು. ಲಿಟನ್ ದಾಸ್(11) ವಾಷಿಂಗಟನ್ ಸುಂದರ್ ಬೌಲಿಂಗ್'ನಲ್ಲಿ ವಿಕೆಟ್ ಒಪ್ಪಿಸಿದರೆ, ತಮೀಮ್ ಇಕ್ಬಾಲ್ ಚಾಹಲ್ ಬೌಲಿಂಗ್'ನಲ್ಲಿ ದೊಡ್ಡಹೊಡೆತಕ್ಕೆ ಕೈಹಾಕಿ ಠಾಕೂರ್ ಹಿಡಿದ ಅದ್ಭುತ ಕ್ಯಾಚ್'ಗೆ ಬಲಿಯಾದರು.

ಇದಾದ ಬಳಿಕವೂ ಚಾಹಲ್ ಕೈಚಳಕ ಮುಂದುವರೆಯಿತು. ಸೌಮ್ಯ ಸರ್ಕಾರ್ ಹಾಗೂ ಮುಷ್ಫಿಕರ್ ರಹೀಮ್ ಕೂಡಾ ಚಾಹಲ್'ಗೆ ಬಲಿಯಾದರು.  ಆ ಬಳಿಕ ಮೊಹಮ್ಮದ್ದುಲ್ಲಾ ಹಾಗೂ ಶಬ್ಬೀರ್ ರೆಹಮಾನ್ ತಂಡಕ್ಕೆ ಆಸರೆಯಾದರು. ಈ ಜೋಡಿ ಬಾಂಗ್ಲಾವನ್ನು ನೂರರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ಮೊಹಮ್ಮದುಲ್ಲಾ ಹಾಗೂ ನಾಯಕ ಶಕೀವ್ ಅಲ್ ಹಸನ್ ರನೌಟ್'ಗೆ ಬಲಿಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಶಬ್ಬೀರ್ ಕೇವಲ 50 ಎಸೆತಗಳಲ್ಲಿ 77 ರನ್ ಸಿಡಿಸಿ ಉನಾದ್ಕತ್'ಗೆ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ನಿರಂತರ ವಿಕೆಟ್ ಕಳೆದುಕೊಂಡ ಬಾಂಗ್ಲಾ ಅಂತಿಮವಾಗಿ 166 ರನ್'ಗಳಿಸಿತು.

ಭಾರತ ಪರ ಚಾಹಲ್ 3, ಉನಾದ್ಕತ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಶಬ್ಬೀರ್ ರೆಹಮಾನ್: 77

ಚಾಹಲ್: 18/3

(*ವಿವರ ಅಪೂರ್ಣ)    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cricket: ನನ್ನ ತಂದೆಯನ್ನು ಉಳಿಸಿ, ಸ್ಟಾರ್ ಕ್ರಿಕೆಟರ್ ಮಗನ ಕಣ್ಣೀರಿನ ಮನವಿ! ದಿಗ್ಗಜ ಆಟಗಾರನಿಗೆ ಆಗಿದ್ದಾದರೂ ಏನು?
ಇತಿಹಾಸ ಸೃಷ್ಟಿಸಿದ ಶ್ರೇಯಸ್‌ ಅಯ್ಯರ್‌, ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಕ್ಯಾಪ್ಟನ್‌...