ಆಂಗ್ಲರಿಗೆ ದಿಟ್ಟ ತಿರುಗೇಟು ನೀಡಿದ ಟೀಂ ಇಂಡಿಯಾ

Published : Dec 09, 2016, 12:21 PM ISTUpdated : Apr 11, 2018, 12:42 PM IST
ಆಂಗ್ಲರಿಗೆ ದಿಟ್ಟ ತಿರುಗೇಟು ನೀಡಿದ ಟೀಂ ಇಂಡಿಯಾ

ಸಾರಾಂಶ

ಅಶ್ವಿನ್ ತನ್ನ ಬುಟ್ಟಿಗೆ ಆರು ವಿಕೆಟ್ ಹಾಕಿಕೊಂಡರೆ, ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಮುಂಬೈ(ಡಿ.09): ಆರಂಭಿಕ ಆಟಗಾರ ಮುರಳಿ ವಿಜಯ್ ಹಾಗೂ ಟೆಸ್ಟ್ ಸ್ಪೆಷಾಲಿಷ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆಂಗ್ಲರಿಗೆ ಟೀಂ ಇಂಡಿಯಾ ದಿಟ್ಟ ತಿರುಗೇಟು ನೀಡಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್'ನ ಎರಡನೇ ದಿನದಾಟ ಮುಕ್ತಾಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿದೆ. ಇನಿಂಗ್ಸ್ ಆರಂಭಿಸಿದ ಮುರುಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಉತ್ತಮ ಜೊತೆಯಾಟ ಆಡುವ ಮುನ್ಸೂಚನೆ ನೀಡಿದರು. ಆದರೆ ರಾಹುಲ್ 24 ರನ್'ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ನಂತರ ಮುರುಳಿ ವಿಜಯ್ (70*) ಅವರನ್ನು ಕೂಡಿಕೊಂಡ ಚೇತೇಶ್ವರ್ ಪೂಜಾರ (47*) ಎರಡನೇ ವಿಕೆಟ್'ಗೆ ಮುರಿಯದ 107 ರನ್'ಗಳ ಜೊತೆಯಾಟ ಆಡುವ ಮೂಲಕ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಎರಡನೇ ದಿನದಾಟ ಮುಕ್ತಾಯಕ್ಕೆ

ಸ್ಪಿನ್ ಮೋಡಿಗೆ ಆಂಗ್ಲರು ಕಂಗಾಲು:

ಇದಕ್ಕೂ ಮೊದಲು 288 ಗಳಿಗೆ 5 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಪಡೆಗೆ ಭಾರತೀಯ ಸ್ಪಿನ್ನರ್'ಗಳಾದ ಅಶ್ವಿನ್ ಹಾಗೂ ಜಡೇಜಾ ಮಾರಕವಾಗಿ ಪರಿಣಮಿಸಿದರು. ದಿನದಾಟದ ಆರಂಭದಲ್ಲೇ ಬೆನ್'ಸ್ಟ್ರೋಕ್ ಅವರಿಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನೊಂದೆಡೆ ಚುರುಕಿನ ದಾಳಿ ನಡೆಸಿದ ಎಡಗೈ ಸ್ಪಿನ್ನರ್ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ದಿಟ್ಟ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್(76) ಗಳಿಸಿ ತಂಡವನ್ನು ಸವಾಲಿನ ಮೊತ್ತದತ್ತ ಸಾಗಿಸುವಲ್ಲಿ ಯಶಸ್ವಿಯಾದರು.

ಅಶ್ವಿನ್ ತನ್ನ ಬುಟ್ಟಿಗೆ ಆರು ವಿಕೆಟ್ ಹಾಕಿಕೊಂಡರೆ, ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಸ್ಕೋರ್ ವಿವರ:

ಭಾರತ: 146/1

ಮುರಳಿ ವಿಜಯ್: 70*

ಚೇತೇಶ್ವರ ಪೂಜಾರ: 47

ಇಂಗ್ಲೆಂಡ್: 400/10

ಕೇತನ್ ಜೆನ್ನಿಂಗ್ಸ್: 112

ಜೋಸ್ ಬಟ್ಲರ್: 76

ಅಶ್ವಿನ್ 112/6

ಜಡೇಜಾ 109/4

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರಿ ಕುತೂಹಲ ಕೆರಳಿಸಿದ ಆರ್‌ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್
ಯಾರೂ ಊಹಿಸದ ಕೆಲಸ ಮಾಡಿದ ಸಚಿನ್​ ತೆಂಡೂಲ್ಕರ್​ ಪುತ್ರ! ಸ್ಟಾರ್​ ಕಿಡ್​ ಅರ್ಜುನ್​ಗೆ ಶ್ಲಾಘನೆಗಳ ಮಹಾಪೂರ