ಧೋನಿ ದಾಖಲೆ ಬ್ಯಾಟಿಂಗ್; ಭಾರತಕ್ಕೆ ಕೈತಪ್ಪಿತು ಮ್ಯಾಚು

Published : Jul 03, 2017, 01:27 PM ISTUpdated : Apr 11, 2018, 12:51 PM IST
ಧೋನಿ ದಾಖಲೆ ಬ್ಯಾಟಿಂಗ್; ಭಾರತಕ್ಕೆ ಕೈತಪ್ಪಿತು ಮ್ಯಾಚು

ಸಾರಾಂಶ

ಕೆಲ ವರ್ಷಗಳ ಹಿಂದಿನವರೆಗೂ ಧೋನಿ ಬೆಸ್ಟ್ ಫಿನಿಶರ್ ಆಗಿದ್ದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ ಇನಿಂಗ್ಸ್ ಅಂತ್ಯದ ವೇಳೆಗೆ ಸರಿಯಾಗಿ ವೇಗ ಕಂಡುಕೊಂಡು ಬಿಗ್ ಹಿಟ್'ಗಳ ಮೂಲಕ ಗೆಲುವು ದಕ್ಕಿಸಿಕೊಳ್ಳುತ್ತಿದ್ದರು. ನಿನ್ನೆಯ ಪಂದ್ಯದಲ್ಲೂ ಧೋನಿ ಅದೇ ತಂತ್ರ ಅನುಸರಿಸಲು ಮುಂದಾಗಿದ್ದಿರಬಹುದು.

ಆಂಟಿಗುವಾ: ನಿನ್ನೆ ವಿಂಡೀಸ್ ಒಡ್ಡಿದ 190 ರನ್'ಗಳ ಅಲ್ಪಮೊತ್ತದ ಗೆಲುವಿನ ಸವಾಲಿಗೆ ಪ್ರತಿಯಾಗಿ ಭಾರತ ಮುಗ್ಗರಿಸಿ 11 ರನ್'ಗಳಿಂದ ಸೋಲಪ್ಪಿತು. ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಚ್ಚೂಕಡಿಮೆ ಕೊನೆಯವರೆಗೂ ಕ್ರೀಸ್'ನಲ್ಲಿ ನಿಂತರೂ ಗೆಲುವು ದಕ್ಕಿಸಿಕೊಡಲಾಗಲಿಲ್ಲ. ಧೋನಿ ಅರ್ಧಶತಕ ಭಾರತಕ್ಕೆ ಉಪಯೋಗಕ್ಕೆ ಬರಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿನ ಗತಿಯಲ್ಲಿ ಅಜೇಯ 78 ರನ್ ಗಳಿಸಿದ್ದ ಧೋನಿ ಈ ಪಂದ್ಯದಲ್ಲಿ 114 ಬಾಲ್'ನಲ್ಲಿ ಅರ್ಧಶತಕ ಮುಟ್ಟಿದರು. 1999ರ ನಂತರ ಭಾರತೀಯನೊಬ್ಬ ಗಳಿಸಿದ ಅತ್ಯಂತ ನಿಧಾನಗತಿಯ ಅರ್ಧಶತಕ ಇದಾಗಿದೆ. 1999ರಲ್ಲಿ ಸಡಗೋಪನ್ ರಮೇಶ್ ಅರ್ಧಶತಕ ಗಳಿಸಲು 117 ಎಸೆತ ತೆಗೆದುಕೊಂಡಿದ್ದರು. ಅದಾದ ಬಳಿಕ ಧೋನಿಯೇ ಸ್ಲೋಯೆಸ್ಟ್ ಇಂಡಿಯನ್ ಎನಿಸಿದ್ದಾರೆ. 2005ರಲ್ಲಿ ಗಂಗೂಲಿ ಅವರು ಶ್ರೀಲಂಕಾ ವಿರುದ್ಧ 105 ಬಾಲ್'ನಲ್ಲಿ ಅರ್ಧಶತಕ ಗಳಿಸಿದ್ದರು.

ಧೋನಿ ಕ್ರೀಸ್'ನಲ್ಲಿರುವವರೆಗೂ ಭಾರತಕ್ಕೆ ಗೆಲುವಿನ ಆಸೆ ಇತ್ತು. ಆದರೆ, ಪ್ರಮುಖ ಹಂತದಲ್ಲಿ ಧೋನಿ ಔಟಾಗುವ ಮೂಲಕ ಗೆಲುವಿನ ಆಸೆ ಕಮರಿಹೋಗಿತ್ತು.

ಧೋನಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿರಬಹುದು. ಯಾಕೆಂದರೆ, ಕೆಲ ವರ್ಷಗಳ ಹಿಂದಿನವರೆಗೂ ಧೋನಿ ಬೆಸ್ಟ್ ಫಿನಿಶರ್ ಆಗಿದ್ದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ ಇನಿಂಗ್ಸ್ ಅಂತ್ಯದ ವೇಳೆಗೆ ಸರಿಯಾಗಿ ವೇಗ ಕಂಡುಕೊಂಡು ಬಿಗ್ ಹಿಟ್'ಗಳ ಮೂಲಕ ಗೆಲುವು ದಕ್ಕಿಸಿಕೊಳ್ಳುತ್ತಿದ್ದರು. ನಿನ್ನೆಯ ಪಂದ್ಯದಲ್ಲೂ ಧೋನಿ ಅದೇ ತಂತ್ರ ಅನುಸರಿಸಲು ಮುಂದಾಗಿದ್ದಿರಬಹುದು. ಆದರೆ, ಇನಿಂಗ್ಸ್ ಆಕ್ಸಲರೇಟ್ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಕೆಲ ಓವರ್'ಗಳ ಹಿಂದೆಯೇ ಅವರು ತಮ್ಮ ಬ್ಯಾಟಿಂಗ್'ಗೆ ವೇಗ ತಂದುಕೊಂಡಿದ್ದರೆ ಬಹುಶಃ ಗುರಿಯ ಒತ್ತಡ ಕಡಿಮೆ ಇದ್ದಿರತ್ತಿತ್ತು ಎಂಬುದು ಕ್ರಿಕೆಟ್ ತಜ್ಞರ ಮಾತು.

ಭಾರತ ಈ ಪಂದ್ಯ ಸೋಲಲು ಧೋನಿಯೊಬ್ಬರೇ ಕಾರಣರಲ್ಲ. ಎಲ್ಲಾ ಬ್ಯಾಟುಗಾರರೂ ಜವಾಬ್ದಾರರೇ. ಕೊಹ್ಲಿ, ಯುವರಾಜ್ ಸಿಂಗ್, ಧವನ್ ವಿಫಲರಾಗಿದ್ದು ಭಾರತಕ್ಕೆ ಮುಳುವಾಯಿತು. ಆದರೆ, 100ಕ್ಕೂ ಹೆಚ್ಚು ಬಾಲ್ ಆಡಿ ಕ್ರೀಸ್'ನಲ್ಲಿದ್ದ ಧೋನಿ ಮೇಲೆ ಎಲ್ಲರ ನಂಬಿಕೆ ನೆಟ್ಟಿದ್ದಂತೂ ಸುಳ್ಳಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್-19 ಏಷ್ಯಾಕಪ್: ಭಾರತದ ಆಟಗಾರರ ಮೇಲೆ ಮೊಹ್ಸಿನ್ ನಖ್ವಿ ಗರಂ, ಐಸಿಸಿಗೆ ದೂರು ನೀಡಲು ರೆಡಿಯಾದ ಪಾಕ್ ಸಚಿವ!
ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!