
ರಾಂಚಿ(ಮಾ.17): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದಾ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿ ಇರುತ್ತಾರೆ.
ಭಾರತ ಭೂಪಟದಲ್ಲಿ ರಾಂಚಿಗೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟ ಧೋನಿ, ಇದೀಗ ತಮ್ಮ ತವರಲ್ಲಿ ಮತ್ತೊಂದು ಭವ್ಯ ಬಂಗಲೆ ನಿರ್ಮಿಸಲು ಕೈಹಾಕಿದ್ದಾರೆ.
‘ಎಂಇಸಿಓಎನ್’ ಸಂಸ್ಥೆಯಲ್ಲಿ ಪಂಪ್ ನಿರ್ವಾಹಕರಾಗಿದ್ದ ಅವರ ತಂದೆಗೆ ನೀಡಲಾಗಿದ್ದ ಸಣ್ಣ ಮನೆಯಲ್ಲೇ ಬಾಲ್ಯ ಕಳೆದ ಧೋನಿ, ಭಾರತ ತಂಡದ ನಾಯಕನಾದ ಬಳಿಕ ಇಲ್ಲಿನ ಹರ್ಮು ಪ್ರದೇಶದಲ್ಲಿ ಅತ್ಯಾಧುನಿಕ ವಿನ್ಯಾಸದ ಬಂಗಲೆಯನ್ನು ನಿರ್ಮಿಸಿದ್ದರು. ಸದ್ಯ ರಾಂಚಿಯ ವರ್ತುಲ ರಸ್ತೆಯಲ್ಲಿರುವ ಏಳು ಎಕರೆ ಜಾಗದಲ್ಲಿ, ಹೊಸ ತೋಟದ ಮನೆ ನಿರ್ಮಿಸುತ್ತಿದ್ದಾರೆ.
ಈ ಭವ್ಯ ಬಂಗಲೆಯಲ್ಲಿ ಒಳಾಂಗಣ ಕ್ರೀಡಾಂಗಣವಿರಲಿದೆ ಅನ್ನುವ ಸುದ್ದಿ ಎಲ್ಲರ ಹುಬ್ಬೇರಿಸಿದೆ. ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದೂವರೆ ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.