
ಡಬ್ಲಿನ್(ಜೂ.30): ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ದಾಖಲೆ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಆದಲೆ ಪಂದ್ಯ ಆರರಂಭಕ್ಕೂ ಮೊದಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವಾಗಿತ್ತು. ತಂಡದಲ್ಲಿ ನೆಚ್ಚಿನ ಕ್ರಿಕೆಟಿಗ ಎಂ ಎಸ್ ಧೋನಿ ಹೆಸರೇ ಇರಲಿಲ್ಲ.
2ನೇ ಚುಟುಕು ಸಮರದಲ್ಲಿ ಎಂ ಎಸ್ ಧೋನಿ ಡಗೌಟ್ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ಎಂ ಎಸ್ ಧೋನಿ ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ ಈ ಬಾರಿ ಧೋನಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡರು. ದೊಡ್ಡ ಬ್ಯಾಗ್ ಹಿಡಿದು ಮೈದಾನಕ್ಕಿಳಿದ ಎಂ ಎಸ್ ಧೋನಿ, ಕ್ರೀಸ್ನಲ್ಲಿದ್ದ ಸುರೇಶ್ ರೈನಾ ಹಾಗೂ ಕೆಎಲ್ ರಾಹುಲ್ಗೆ ನೀರು ನೀಡಿದರು.
ಐಸಿಸಿಯ ಮೂರು ಟ್ರೋಫಿ ಗೆದ್ದ ಏಕೈಕ ನಾಯಕ ಎಂ ಎಸ್ ಧೋನಿ. ಆದರೆ ಧೋನಿ ಅದೆಷ್ಟೇ ಎತ್ತರಕ್ಕೆ ಬೆಳೆದರು ತಮ್ಮ ಸರಳೆಯನ್ನ ಹಾಗೆ ಮುಂದುವರಿಸಿದ್ದಾರೆ. ತಂಡದಿಂದ ಹೊರಗುಳಿದು ಸತಃ ಧೋನಿ ಡ್ರಿಂಕ್ಸ್ ಕಿಟ್ ಹಿಡಿದು ಮೈದಾನಕ್ಕೆ ತೆರಳಿದ ಧೋನಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಪಂದ್ಯದಲ್ಲಿ ಭಾರತ 213 ರನ್ ಸಿಡಿಸಿತ್ತು. ಇಷ್ಟೇ ಅಲ್ಲ 143 ರನ್ಗಳ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. 2 ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಭಾರತ ಸರಣಿ ವಶಪಡಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.