
ಬೆಂಗಳೂರು(ಜೂ.26): ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ರಾಯಭಾರಿಯಾಗಿ ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ನೇಮಕಗೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ರಿಯಲ್ ಎಸ್ಟೇಟ್ ಮೂಲಕ ಜನಪ್ರೀಯವಾಗಿರೋ ಸುಮಧುರ ಗ್ರೂಪ್ ಸಂಸ್ಥೆಗೆ ಧೋನಿ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ನಾಯಕ ಹಾಗೂ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುಎಂ ಎಸ್ ಧೋನಿ ಸುಮಧುರ ಸಂಸ್ಥೆಯ ರಾಯಭಾರಿಯಾಗಿ ನೇಮಕಗೊಂಡಿರೋದು ನಮ್ಮ ಹೆಮ್ಮೆ ಎಂದು ಸುಮುಧುರ ರಿಯಲ್ ಎಸ್ಟೇಟ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪ ನಿರ್ದೇಶಕ ಮಧೂಸೂಧನ್ ಜಿ ಹೇಳಿದ್ದಾರೆ.
ವಿಶ್ವದಲ್ಲೇ ಅತ್ಯಂತ ಜನಪ್ರೀಯ ಕ್ರಿಕೆಟಿಗನಾಗಿರೋ ಎಂ ಎಸ್ ಧೋನಿ ಸುಮಧುರ ಸಂಸ್ಥೆಯ ರಾಯಭಾರಿಯಾಗೋ ಮೂಲಕ ಸಂಸ್ಥೆಯ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿದ್ದಾರೆ ಎಂದು ಮಧೂಸೂಧನ್ ಹೇಳಿದ್ದಾರೆ.
ಸುಮಧುರ ಗ್ರೂರ್ ರಾಯಭಾರಿ ಒಪ್ಪಂದಕ್ಕೆ ಧೋನಿಗೆ ನೀಡಿರುವ ಹಣವೆಷ್ಟು ಅನ್ನೋದನ್ನ ಯಾರೂ ಬಹಿರಂಗ ಪಡಿಸಿಲ್ಲ. ಇಷ್ಟೇ ಅಲ್ಲ ಸುಮಧುರ ಹಾಗೂ ಧೋನಿ ನಡುವಿನ ಒಪ್ಪಂದ ಅವಧಿ ಕೂಡ ಬಹಿರಂಗವಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.