ಲಂಕೆಗೆ ನೆರವಾದ ಕರುಣಾರತ್ನೆ ಶತಕ; ಜಯದ ಕನಸಿನಲ್ಲಿ ಬಾಂಗ್ಲಾ

Published : Mar 18, 2017, 04:24 PM ISTUpdated : Apr 11, 2018, 12:59 PM IST
ಲಂಕೆಗೆ ನೆರವಾದ ಕರುಣಾರತ್ನೆ ಶತಕ; ಜಯದ ಕನಸಿನಲ್ಲಿ ಬಾಂಗ್ಲಾ

ಸಾರಾಂಶ

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿ ಆಟವಾಡಿದ ದಿಮುತ್, ಬಾಂಗ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ದಿಮುತ್ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿದರು.

ಕೊಲೊಂಬೊ(ಮಾ.18): ಆರಂಭಿಕ ಬ್ಯಾಟ್ಸ್‌ಮನ್ ದಿಮುತ್ ಕರುಣಾರತ್ನೆ (126) ಅವರ ನಿಧಾನಗತಿಯ ಶತಕದ ನೆರವಿನಿಂದ ಶ್ರೀಲಂಕಾ ತಂಡ, ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 139 ರನ್‌ಗಳ ಸಾಧಾರಣ ಮುನ್ನಡೆ ಪಡೆದಿದ್ದು, ದಿಲ್ರುವಾನ್ ಪೆರೇರಾ (26), ಸುರಂಗ ಲಕ್ಮಲ್ 16 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಐದನೇ ದಿನದಾಟವು ಕುತೂಹಲ ಕೆರಳಿಸಿದೆ.

ಇಲ್ಲಿನ ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಇಂದು ಯಾವುದೇ ವಿಕೆಟ್ ನಷ್ಟವಿಲ್ಲದೇ 54 ರನ್‌'ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆತಿಥೇಯ ಶ್ರೀಲಂಕಾ, ದಿನಾಂತ್ಯಕ್ಕೆ 8 ವಿಕೆಟ್‌'ಗೆ 268 ರನ್‌'ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಲಂಕಾ 129 ರನ್ ಹಿನ್ನಡೆ ಅನುಭವಿಸಿತ್ತು.

ಎರಡನೇ ಇನಿಂಗ್ಸ್ ಮುಂದುವರೆಸಿದ ಲಂಕಾ ಶುಕ್ರವಾರದ ಮೊತ್ತಕ್ಕೆ 3 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಆಟಗಾರ ಉಪುಲ್ ತರಂಗಾ (26) ಅವರನ್ನು ಕಳೆದುಕೊಂಡಿತು. ನಂತರ ಕುಸಾಲ್ ಮೆಂಡೀಸ್, ಜತೆಯಾದ ಕರುಣರತ್ನೆ ತಂಡಕ್ಕೆ ಅಗತ್ಯ ರನ್ ಸೇರಿಸಿದರು. ಮೆಂಡೀಸ್ (36) ರನ್ ಗಳಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿ ಆಟವಾಡಿದ ದಿಮುತ್, ಬಾಂಗ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ದಿಮುತ್ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿದರು. ಬಾಂಗ್ಲಾ ಪರ ಮುಸ್ತಾಫಿಜುರ್, ಶಕೀಬ್ ಅಲ್ ಹಸನ್ ತಲಾ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ ಮೊದಲ ಇನಿಂಗ್ಸ್: 338

ಬಾಂಗ್ಲಾದೇಶ ಮೊದಲ ಇನಿಂಗ್ಸ್: 467

ಶ್ರೀಲಂಕಾ ದ್ವಿತೀಯ ಇನಿಂಗ್ಸ್: 100 ಓವರ್‌'ಗಳಲ್ಲಿ 8 ವಿಕೆಟ್‌ಗೆ 268

(ದಿಮುತ್ 126, ದಿಲುರುವಾನ್ 26*, ಮುಸ್ತಾಫಿಜುರ್ 52/3)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ