ಮೊಹಾಲಿಯಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧ ರಣಜಿ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ 10 ವಿಕೆಟ್`ಗಳ ಭರ್ಜರಿ ಜಯ ದಾಖಲಿಸಿದೆ. ಮಹಾರಾಷ್ಟ್ರವನ್ನ 163 ರನ್`ಗೆ ಆಲೌಟ್ ಮಾಡಿದ್ದ ಕರ್ನಾಟಕ, 345 ರನ್ ಹೊಡೆಯುವ ಮೂಲಕ 182 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಮೊಹಾಲಿ(ಡಿ.09): ಮೊಹಾಲಿಯಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧ ರಣಜಿ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ 10 ವಿಕೆಟ್`ಗಳ ಭರ್ಜರಿ ಜಯ ದಾಖಲಿಸಿದೆ. ಮಹಾರಾಷ್ಟ್ರವನ್ನ 163 ರನ್`ಗೆ ಆಲೌಟ್ ಮಾಡಿದ್ದ ಕರ್ನಾಟಕ, 345 ರನ್ ಹೊಡೆಯುವ ಮೂಲಕ 182 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಸೆಕೆಂಡ್ ಇನ್ನಿಂಗ್ಸ್`ನಲ್ಲಿ ಮಹಾರಾಷ್ಟ್ರ 218 ರನ್`ಗೆ ಆಲೌಟ್ ಆಯ್ತು. 37 ರನ್`ಗಳ ಗುರಿ ಬೆನ್ನತ್ತಿದ ಕರ್ನಾಟಕ ಯಾವುದೇ ವಿಕೆಟ್ ನಷ್ಟಇಲ್ಲದೆ ಪಂದ್ಯ ಗೆದ್ದು 7 ಪಾಯಿಂಟ್ ತನ್ನದಾಗಿಸಿಕೊಂಡಿತು.
ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ವಿನಯ್ ಕುಮಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.