ಸ್ಯಾಂಡಲ್ವುಡ್ ಸ್ಟಾರ್ , ಕರ್ನಾಟಕ ರಣಜಿ ಆಟಗಾರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿ 2ನೇ ದಿನಕ್ಕೆ ಕಾಲಿಟ್ಟಿದೆ. ದ್ವಿತೀಯ ದಿನದ ಮೊದಲ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಬೆಂಗಳೂರು(ಸೆ.09): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರು ಕರ್ನಾಟಕ ಚಲನ ಚಿತ್ರ ಟೂರ್ನಿಯಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಗೆಲುವಿನ ನಗೆ ಬೀರಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡದ ವಿರುದ್ಧ ಯಶ್ ಸೈನ್ಯ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪುನೀತ್ ತಂಡ 109 ರನ್ಗಳಿಸಲಷ್ಟೇ ಸಾಧ್ಯವಾಗಿತ್ತು.
110ರನ್ ಟಾರ್ಗೆಟ್ ಪಡೆದ ಯಶ್ ಸೈನ್ಯ, ಕೇವಲ 7.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸ್ಟಾಲಿನ್ ಹೂವರ್ ಅಜೇಯ 72 ಹಾಗೂ ಕೃಷ್ಣ ಅಜೇಯ 22 ರನ್ಗಳ ನೆರವಿನಿಂದ ರಾಷ್ಟ್ರಕೂಟ ತಂಡ ಸುಲಭ ಗೆಲುವು ಸಾಧಿಸಿತು.