ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸತತ 2ನೇ ಜಯ

Published : Feb 26, 2017, 01:43 PM ISTUpdated : Apr 11, 2018, 12:47 PM IST
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸತತ 2ನೇ ಜಯ

ಸಾರಾಂಶ

ನಿನ್ನೆ ಧೋನಿ ನೇತೃತ್ವದ ಜಾರ್ಖಂಡ್ ಪಡೆ ವಿರುದ್ಧ ಜಯ ಸಾಧಿಸಿದ್ದ ಕರ್ನಾಟಕಕ್ಕೆ ಇದು ಸತತ 2ನೇ ಗೆಲುವಾಗಿದೆ. ಡಿ ಗುಂಪಿನಲ್ಲಿ ಎಂಟು ಅಂಕಗಳೊಂದಿಗೆ ಹೈದರಾಬಾದ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ.

ಕೋಲ್ಕತಾ(ಫೆ. 26): ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಇಲ್ಲಿಯ ಜಾದವಪುರ್ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಡಿ ಪಂದ್ಯದಲ್ಲಿ ಸರ್ವಿಸಸ್ ತಂಡವನ್ನು ಕರ್ನಾಟಕ 4 ವಿಕೆಟ್'ಗಳಿಂದ ಪರಾಭವಗೊಳಿಸಿದೆ. ಗೆಲ್ಲಲು ಸರ್ವಿಸಸ್ ಒಡ್ಡಿದ 232 ರನ್ ಗುರಿಯನ್ನು ಕರ್ನಾಟಕ ಇನ್ನೂ 6 ಓವರ್ ಬಾಕಿ ಇರುವಂತೆಯೇ ಮೆಟ್ಟಿ ನಿಂತಿತು. ಪವನ್ ದೇಶಪಾಂಡೆ, ರಾಬಿನ್ ಉತ್ತಪ್ಪ, ಅನಿರುದ್ಧ್ ಜೋಷಿ ಮತ್ತು ಜಗದೀಶ್ ಸುಚಿತ್ ಅವರು ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಿನ್ನೆ ಧೋನಿ ನೇತೃತ್ವದ ಜಾರ್ಖಂಡ್ ಪಡೆ ವಿರುದ್ಧ ಜಯ ಸಾಧಿಸಿದ್ದ ಕರ್ನಾಟಕಕ್ಕೆ ಇದು ಸತತ 2ನೇ ಗೆಲುವಾಗಿದೆ. ಡಿ ಗುಂಪಿನಲ್ಲಿ ಎಂಟು ಅಂಕಗಳೊಂದಿಗೆ ಹೈದರಾಬಾದ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ. ರಾಜ್ಯದ ತಂಡವು ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದ್ದು, ಹೈದರಾಬಾದ್, ಜಮ್ಮು-ಕಾಶ್ಮೀರ, ಛತ್ತೀಸ್'ಗಡ ಮತ್ತು ಸೌರಾಷ್ಟ್ರ ತಂಡಗಳ ಸವಾಲನ್ನು ಎದುರಿಸಲಿದೆ.

ಸರ್ವಿಸಸ್ 50 ಓವರ್ 231/7
(ದಿವೇಶ್ ಪಠಾಣಿಯಾ 49, ಸೂರಜ್ ಯಾದವ್ ಅಜೇಯ 44, ಶಮ್'ಶೇರ್ ಯಾದವ್ 37, ಅಭಿಜಿತ್ ಸಾಳ್ವಿ 30 ರನ್ - ಪ್ರಸಿದ್ಧ್ ಕೃಷ್ಣ 39/3, ಅನಿರುದ್ಧ್ ಜೋಷಿ 32/2)

ಕರ್ನಾಟಕ 44.1 ಓವರ್ 232/6
(ಪವನ್ ದೇಶಪಾಂಡೆ 73, ರಾಬಿನ್ ಉತ್ತಪ್ಪ 51, ಅನಿರುದ್ಧ್ ಜೋಷಿ ಅಜೇಯ 50, ಜಗದೀಶ್ ಸುಚಿತ್ ಅಜೇಯ 24 ರನ್ - ಸೂರಜ್ ಯಾದವ್ 37/2)

ಫೋಟೋ: ರಾಬಿನ್ ಉತ್ತಪ್ಪ ಅವರ ಫೈಲ್ ಫೋಟೋ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 Mini Auction: ಖರೀದಿಸಿದ ಎಂಟು ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!