
ಅಹಮದಬಾದ್(ಅ.09): ವರ್ಲ್ಡ್ಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತೀಯರು, ಕಾಂಗರೂ ಬೇಟೆಯಾಡಿದ್ದಾರೆ. ಫಸ್ಟ್ ಮ್ಯಾಚ್ನಲ್ಲಿ ಸೌತ್ ಕೊರಿಯಾ ವಿರುದ್ಧ ವಿರೋಚಿತವಾಗಿದ್ದ ಸೋತಿದ್ದ ಟೀಮ್ ಇಂಡಿಯಾ, ಆಸೀಸ್ ವಿರುದ್ಧ ಭರ್ಜರಿ ಜಯ ಸಾಧಿಸ್ತು.
ಕೊರಿಯಾ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಭಾರತೀಯರು, ಆಸ್ಟ್ರೇಲಿಯಾ ವಿರುದ್ಧ ಜಯದ ಖಾತೆ ತೆರೆದಿದ್ದಾರೆ. ಕಾಂಗರೂಗಳ ಪಂದ್ಯದಲ್ಲಿ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಟೀಮ್ ಇಂಡಿಯಾ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯ್ತು.
11ನೇ ನಿಮಿಷದಲ್ಲಿ ಕಾಂಗರೂಗಳನ್ನ ಆಲೌಟ್ ಮಾಡಿದ ಭಾರತ 20-2 ಅಂಕಗಳಿಂದ ಭಾರೀ ಮುನ್ನಡೆ ಪಡೆದುಕೊಂಡಿತ್ತು, ಕಬಡ್ಡಿ ಕೂಸು ಕಾಂಗರೂಗಳು ಬಲಿಷ್ಠ ಭಾರತೀಯರ ಮುಂದೆ ಹಸುಗೂಸಾಗಿ ಕಾಣುತ್ತಿತ್ತು.
ಭಾರತ ರೈಡಿಂಗ್ ಮತ್ತು ಅಟ್ಯಾಕಿಂಗ್ ಅದ್ಭುತವಾಗಿತ್ತು. ಮೊದಲಾರ್ಧದಲ್ಲಿ ಟೀಮ್ ಇಂಡಿಯಾ 32-7 ಅಂಕಗಳಿಂದ ಭಾರೀ ಮುನ್ನಡೆ ಪಡೆದುಕೊಂಡಿತ್ತು, ಉತ್ತರಾರ್ಧದ ಆರಂಭದಲ್ಲೇ ಆಸ್ಟ್ರೇಲಿಯಾ ಆಲೌಟ್ ಆಯ್ತು.
ಮೊದಲ ವರ್ಲ್ಡ್ಕಪ್ ಆಡುತ್ತಿರುವ ಆಸೀಸ್, ಭಯದಿಂದಲೇ ಇಡೀ ಪಂದ್ಯವಾಡಿತು. ಕೋಚ್ ಪದೇಪದೇ ಆಟಗಾರರ ಆತ್ಮವಿಶ್ವಾಸ ತುಂಬುತ್ತಿದ್ದರು. ಪಂದ್ಯ ಸಾಗಿದಂತೆ ಭಾರತೀಯರ ಪಾಯಿಂಟ್ ಏರುತ್ತಾ ಹೋದ್ವು. 3ನೇ ಸಲ ಆಸೀಸ್ ಆಲೌಟ್ ಆಯ್ತು. ಭಾರತ 49-15ರಿಂದ ಮುನ್ನಡೆ ಕಾಯ್ದುಕೊಂಡಿತು.
ಕೊನೆಗೆ ಭಾರತ 53-20 ಅಂಕಗಳಿಂದ ಪಂದ್ಯ ಗೆದ್ದುಕೊಳ್ತು. ಈ ಮೂಲಕ ಕೊರಿಯಾ ವಿರುದ್ಧ ಸೋಲಿನ ಕಹಿಯನ್ನ ಭಾರತೀಯರು ಮರೆತರು,
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.