ವಿಶ್ವಕಪ್ ಕಬಡ್ಡಿ: ಸೆಮಿಫೈನಲ್'ಗೆ ಕಾಲಿಟ್ಟ ಭಾರತ

Published : Oct 19, 2016, 04:58 AM ISTUpdated : Apr 11, 2018, 12:48 PM IST
ವಿಶ್ವಕಪ್ ಕಬಡ್ಡಿ: ಸೆಮಿಫೈನಲ್'ಗೆ ಕಾಲಿಟ್ಟ ಭಾರತ

ಸಾರಾಂಶ

25 ಅಂಕ​ಗ​ಳಿ​ಸಿ​ರುವ ದಕ್ಷಿಣ ಕೊರಿ​ಯಾದ ಈ ವಿಭಾ​ಗ​ದಲ್ಲಿ ಅಗ್ರ​ಸ್ಥಾ​ನ​ದ​ಲ್ಲಿದ್ದು, ಭಾರ​ತ​ದೊಂದಿಗೆ ಈ ಗುಂಪಿ​ನಿಂದ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ ಮತ್ತೊಂದು ತಂಡ​ವಾ​ಗಿದೆ.

ಅಹ್ಮ​ದಾ​ಬಾ​ದ್‌: ಪ್ರಮುಖ ಆಟ​ಗಾ​ರ​ರಾದ ಪ್ರದೀಪ್‌ ನರ್ವಾಲ್‌ ಅವರ 13 ಅಂಕ ಹಾಗೂ ಅಜಯ್‌ ಠಾಕೂರ್‌ ಅವರ 11 ಅಂಕ​ಗಳ ನೆರ​ವಿ​ನಿಂದಾಗಿ, ಮಂಗ​ಳ​ವಾರ ನಡೆದ ವಿಶ್ವ ಕಬಡ್ಡಿ ಪಂದ್ಯಾ​ವ​ಳಿಯ ತನ್ನ ಮಹ​ತ್ವದ ಪಂದ್ಯ​ದಲ್ಲಿ ಇಂಗ್ಲೆಂಡ್‌ ತಂಡ​ವನ್ನು 69-18 ಅಂಕ​ಗಳ ಅಂತ​ರ​ದಲ್ಲಿ ಮಣಿ​ಸಿದ ಭಾರತ, ಪಂದ್ಯಾ​ವ​ಳಿಯ ಸೆಮಿ​ಫೈ​ನ​ಲ್‌'ಗೆ ಕಾಲಿ​ಟ್ಟಿದೆ. 
ಅಲ್ಲಿನ ಟ್ರಾನ್ಸ್‌'ಸ್ಟೇಡಿ​ಯಾ​ದಲ್ಲಿ ನಡೆದ ಪಂದ್ಯದಲ್ಲಿ ನೆರೆ​ದಿದ್ದ ಪ್ರೇಕ್ಷ​ಕ​ರಲ್ಲಿ ಹುರುಪು ತುಂಬಿ​ಸು​ವಂಥ ಪ್ರದ​ರ್ಶನ ನೀಡಿದ ಭಾರತ, ಈ ಗೆಲ​ವಿ​ನೊಂದಿಗೆ ಟೂರ್ನಿಯ ಅಂಕ​ಪ​ಟ್ಟಿ​ಯಲ್ಲಿ ತಾನಿ​ರುವ ಎ ಗುಂಪಿನಲ್ಲಿ ದ್ವಿತೀಯ ಸ್ಥಾನ​ಕ್ಕೇ​ರಿದೆ. ಈವ​ರೆಗೆ ಐದು ಪಂದ್ಯ​ಗ​ಳ​ನ್ನಾ​ಡಿ​ರುವ ಅದು, 4 ಗೆಲವು, 1 ಸೋಲು ಕಂಡು ಒಟ್ಟಾರೆ 21 ಅಂಕ​ಗ​ಳನ್ನು ಪೇರಿ​ಸಿದೆ. 25 ಅಂಕ​ಗ​ಳಿ​ಸಿ​ರುವ ದಕ್ಷಿಣ ಕೊರಿ​ಯಾದ ಈ ವಿಭಾ​ಗ​ದಲ್ಲಿ ಅಗ್ರ​ಸ್ಥಾ​ನ​ದ​ಲ್ಲಿದ್ದು, ಭಾರ​ತ​ದೊಂದಿಗೆ ಈ ಗುಂಪಿ​ನಿಂದ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ ಮತ್ತೊಂದು ತಂಡ​ವಾ​ಗಿದೆ. 
ಪಂದ್ಯದ ಆರಂಭ​ದಲ್ಲೇ ಭಾರ​ತೀಯ ಮೂಲದ ಸೋಮ​ಶೇ​ಖರ್‌ ಕಾಲಿಯಾ ಅವರು, ಇಂಗ್ಲೆಂಡ್‌ ತಂಡಕ್ಕೆ 2 ಅಂಕ​ಗ​ಳನ್ನು ತಂದಿ​ತ್ತರು. ಆದರೆ, ಮೂರನೇ ನಿಮಿ​ಷ​ದಲ್ಲಿ ಭಾರ​ತ ಪಾಳ​ಯದ ಸಂದೀಪ್‌ ನರ್ವಾಲ್‌ ಒಂದು ಸೂಪರ್‌ ರೈಡ್‌ ನಡೆಸಿ ಭಾರ​ತಕ್ಕೆ ಒಮ್ಮೆಲೇ ಐದು ತಂದು​ಕೊ​ಟ್ಟರು. ಅಂತೆಯೇ, ಆರನೇ ನಿಮಿ​ಷ​ದಲ್ಲಿ ಎದು​ರಾ​ಳಿ​ಗ​ಳನ್ನು ಆಲೌಟ್‌ ಮಾಡಿದ ಭಾರತ, ತನ್ನ ಅಂಕಗಳ ಅಂತ​ರ​ವನ್ನು 12-3ಕ್ಕೆ ಹೆಚ್ಚಿ​ಸಿ​ಕೊಂಡಿತು. 
ಈ ಹಂತ​ದಲ್ಲಿ ಭಾರ​ತಕ್ಕೆ ನೆರ​ವಾದ ರೈಡರ್‌ ಪ್ರದೀಪ್‌ ನರ್ವಾಲ್‌, ಮತ್ತೆ​ರಡು ಅಂಕ​ಗ​ಳನ್ನು ತರುವ ಮೂಲಕ ಈ ಅಂತ​ರ​ವನ್ನು 14-3ಕ್ಕೆ ಹೆಚ್ಚಿ​ಸಿ​ದರು. ಅಲ್ಲಿ ಮಿಂಚಿ​ದ ಸಂದೀಪ್‌ ನರ್ವಾಲ್‌ ಕೇವಲ 13 ನಿಮಿ​ಷ​ಗ​ಳಲ್ಲಿ ಭಾರ​ತಕ್ಕೆ 13 ಅಂಕ​ಗ​ಳನ್ನು ತಂದು​ಕೊ​ಟ್ಟರು. 16ನೇ ನಿಮಿ​ಷ​ದಲ್ಲಿ ಭಾರತ, ಇಂಗ್ಲೆಂಡ್‌ ತಂಡ​ವನ್ನು ಮತ್ತೊಮ್ಮೆ ಆಲೌಟ್‌ ಮಾಡುವ ಮೂಲಕ ತನ್ನ ಅಂಕ​ಗಳ ಅಂತ​ರ​ವನ್ನು 35-5ಕ್ಕೆ ಹೆಚ್ಚಿ​ಸಿ​ಕೊಂಡಿತು. ಇನ್ನು, 20ನೇ ನಿಮಿ​ಷ​ದಲ್ಲಿ ಇಂಗ್ಲೆಂಡ್‌ ತಂಡ​ವನ್ನು ಮತ್ತೆ ಆಲೌಟ್‌ ಮಾಡಿದ ಭಾರತ 45-6 ಅಂಕಗಳ ಅಂತರ ಹೆಚ್ಚಿ​ಸಿ​ಕೊ​ಳ್ಳುವ ಮೂಲಕ ಪಂದ್ಯ​ದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿ​ಸಿತು. ಹೀಗೆ, ಸಾಗಿದ ಭಾರ​ತದ ರೋಚಕ ಪ್ರದ​ರ್ಶ​ನದ ಮುಂದೆ ಮಂಕಾದ ಇಂಗ್ಲೆಂಡ್‌, ಕೊನೆಗೂ ಸೋಲೊ​ಪ್ಪಿ​ಕೊಂಡಿತು.
ಕೀನ್ಯಾ ಕನಸು ಜೀವಂತ: ದಿನದ ಮತ್ತೊಂದು ಪಂದ್ಯ​ದಲ್ಲಿ ಅಮೆ​ರಿಕ ತಂಡದ ವಿರುದ್ಧ 74-19 ಅಂಕ​ಗಳ ಭಾರೀ ಅಂತ​ರ​ದ ಗೆಲುವು ಸಾಧಿಸಿದ ಕೀನ್ಯಾ, ತನ್ನ ಸೆಮಿಫೈನಲ್‌ ಕನ​ಸನ್ನು ಜೀವಂತವಾಗಿಟ್ಟಿತು.

(ಕೃಪೆ: ಕನ್ನಡಪ್ರಭ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!