
ವಿಶಾಖಪಟ್ಟಣ(ನ.17):ಭಾರತದಲ್ಲಿ ಪಂದ್ಯ ನಡೆಯುವಾಗ ಸ್ಟೇಡಿಯಂಗೆ ಶ್ವಾನ ಬರುವುದು ಸಾಮಾನ್ಯವಾಗಿದೆ. ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ನಡೆಯುತ್ತಿರುವ ವೈಜಾಕ್ ಸ್ಟೇಡಿಯಂಗೂ ಶ್ವಾನ ನುಗ್ಗಿ ಕೆಲವೊತ್ತು ಪ್ರೇಕ್ಷಕರು ಹಾಗೂ ಆಟಗಾರರನ್ನ ರಂಜಿಸಿತು.
ಮೊದಲ ದಿನದಾಟದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದಾಗ ಮೈದಾನಕ್ಕೆ ಶ್ವಾನ ಪ್ರವೇಶ ಆಯ್ತು. ಅದನ್ನ ಓಡಿಸಲು ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.
ಪದೇಪದೇ ಮೈದಾನದ ಒಳಗೆ ಸುತ್ತಾಡುತ್ತಲೇ ಇತ್ತು. ಬೇಸತ್ತ ಅಂಪೈರ್ಗಳು ಟೀ ವಿರಾಮ ಘೋಷಿಸಿದರು. ಇದರಿಂದ ಆಟಗಾರರಿಗೂ ಕೆಲ ಹೊತ್ತು ವಿಶ್ರಾಂತಿ ಸಿಕ್ಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.