ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಿದು ಬ್ಯಾಡ್ ನ್ಯೂಸ್..!

Published : Feb 11, 2018, 03:17 PM ISTUpdated : Apr 11, 2018, 01:04 PM IST
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಿದು ಬ್ಯಾಡ್ ನ್ಯೂಸ್..!

ಸಾರಾಂಶ

‘ಸಾಮಾನ್ಯವಾಗಿ ಐಸಿಸಿ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸುವ ರಾಷ್ಟ್ರಗಳು, ತೆರಿಗೆ ವಿನಾಯ್ತಿ ನೀಡುತ್ತವೆ. ಆದರೆ ಭಾರತ ಸರ್ಕಾರ ಮಾತ್ರ ಪ್ರತಿ ಬಾರಿ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ ಬಂದಿದೆ. ಐಸಿಸಿ ಹಾಗೂ ಬಿಸಿಸಿಐ ನಿರಂತರವಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾವುದೇ ಧನಾತ್ಮಕ ಪ್ರತಿ ಕ್ರಿಯೆ ಲಭ್ಯವಾಗಿಲ್ಲ’ ಎಂದು ಐಸಿಸಿ ತಿಳಿಸಿದೆ.

ದುಬೈ(ಫೆ.11): ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿ ನೀಡದಿದ್ದರೆ, 2021ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದಿಂದ ಸ್ಥಳಾಂತರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.

ಭಾರತದ ಬದಲು ಆತಿಥ್ಯ ವಹಿಸಬಲ್ಲ ಏಷ್ಯಾದ ರಾಷ್ಟ್ರಗಳ ಹುಡುಕಾಟವನ್ನು ಐಸಿಸಿ ಆರಂಭಿಸಿದೆ. ಶುಕ್ರವಾರ ನಡೆದ ಸಭೆ ಬಳಿಕ ಐಸಿಸಿ, ಭಾರತ ಸರ್ಕಾರ ತೆರಿಗೆ ವಿನಾಯ್ತಿ ನೀಡಲು ನಿಕಾರಿಸುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಆದರೆ, ಬಿಸಿಸಿಐ ಸಹಾಯದೊಂದಿಗೆ ಭಾರತ ಸರ್ಕಾರದೊಂದಿಗೆ ಮತ್ತೆ ಕೆಲ ಸುತ್ತುಗಳ ಮಾತುಕತೆ ನಡೆಸುವುದಾಗಿ ಐಸಿಸಿ ತಿಳಿಸಿದೆ. ಒಂದೊಮ್ಮೆ ತೆರಿಗೆ ವಿನಾಯ್ತಿ ನೀಡದಿದ್ದರೆ, ಐಸಿಸಿಗೆ ಸುಮಾರು ₹642 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

‘ಸಾಮಾನ್ಯವಾಗಿ ಐಸಿಸಿ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸುವ ರಾಷ್ಟ್ರಗಳು, ತೆರಿಗೆ ವಿನಾಯ್ತಿ ನೀಡುತ್ತವೆ. ಆದರೆ ಭಾರತ ಸರ್ಕಾರ ಮಾತ್ರ ಪ್ರತಿ ಬಾರಿ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ ಬಂದಿದೆ. ಐಸಿಸಿ ಹಾಗೂ ಬಿಸಿಸಿಐ ನಿರಂತರವಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾವುದೇ ಧನಾತ್ಮಕ ಪ್ರತಿ ಕ್ರಿಯೆ ಲಭ್ಯವಾಗಿಲ್ಲ’ ಎಂದು ಐಸಿಸಿ ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಸಿಸಿಐ ACU ದಾಳಿಯಲ್ಲಿ ಸಿಕ್ಕಿಬಿದ್ದ ಐಪಿಎಲ್ ಸ್ಟಾರ್ ಪ್ಲೇಯರ್, ಹೊಟೆಲ್ ರೂಂನ ತಡರಾತ್ರಿ ಸೀಕ್ರೆಟ್
ರೋಹಿತ್ ಶರ್ಮಾ ಕಟ್ಟಿದ್ದ 3.25 ಕೋಟಿ ರೂ ವಾಚ್ ಕದಿಯಲು ಯತ್ನಿಸಿದ್ರಾ ಫ್ಯಾನ್ಸ್, ದೃಶ್ಯ ಸೆರೆ