
ನವದೆಹಲಿ(ಡಿ.06): ಕಿರಿಯರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದ ಆಟಗಾರರಿಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭವಿಷ್ಯದಲ್ಲಿ ಸುವರ್ಣಾವಕಾಶಗಳು ಒದಗಿ ಬರಲಿವೆ ಎಂದು ಹಿರಿಯರ ಹಾಕಿ ತಂಡದ ಪ್ರಧಾನ ಕೋಚ್ ರೋಲೆಂಟ್ ಓಲ್ಟ್ಮನ್ಸ್ ಕಿವಿಮಾತು ಹೇಳಿದ್ದಾರೆ.
ಟೂರ್ನಿಯಲ್ಲಿ ನೀಡುವ ಪ್ರದರ್ಶನ ಹಿರಿಯರ ತಂಡಕ್ಕೆ ಸೇರ್ಪಡೆಗೊಳ್ಳುವ ಉತ್ತಮ ಅವಕಾಶವನ್ನು ಒದಗಿಸಿಕೊಡಲಿದೆ. ಆಟದ ಮೇಲೆ ಆಟಗಾರರು ಹೆಚ್ಚು ಗಮನ ನೀಡಬೇಕೆಂದು ಭಾರತೀಯ ಕಿರಿಯರ ತಂಡವನ್ನು ಭೇಟಿ ಮಾಡಿದ ಓಲ್ಟ್ಮನ್ಸ್ ಹೇಳಿದ್ದಾರೆ
ಇದೇವೇಳೆ ಅವರು, ‘‘2017ರ ಹಾಕಿ ಇಂಡಿಯಾ ಲೀಗ್ (ಎಚ್'ಐಎಲ್) ನಂತರ ಪ್ರಮುಖ ಆಟಗಾರರ ಸಮರ್ಥ ತಂಡವೊಂದರನ್ನು ಸಿದ್ಧಪಡಿಸುವ ಆಲೋಚನೆಯಿದೆ. ಆದರೆ, ಅದು ವಿಶ್ವಕಪ್, ಎಚ್'ಐಎಲ್'ನಲ್ಲಿನ ಪ್ರದರ್ಶನದ ಮೇಲೆ ಅವಲಂಬಿತ’’ ಎಂದು ತಿಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.