ಐಸಿಸಿಯಿಂದಲೂ ಬಿಸಿಸಿಐಗೆ ಗುದ್ದು

Published : Nov 22, 2016, 03:54 PM ISTUpdated : Apr 11, 2018, 01:05 PM IST
ಐಸಿಸಿಯಿಂದಲೂ ಬಿಸಿಸಿಐಗೆ ಗುದ್ದು

ಸಾರಾಂಶ

‘‘ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಂಗಪುರದಲ್ಲಿ ನಡೆದಿದ್ದ ಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನ್ನನ್ನು ಆಹ್ವಾನಿಸದ ಐಸಿಸಿ, ಇದೀಗ ಇದೇ ವಾರ ಅಡಿಲೇಡ್‌ನಲ್ಲಿ ಆರಂಭವಾಗುತ್ತಿರುವ ಎರಡನೇ ಸುತ್ತಿನ ಸಭೆಗೂ ಕೈಬಿಟ್ಟಿದೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ‘ದ ಟೈಮ್ಸ್ ಆ್ ಇಂಡಿಯಾ’ ಹೇಳಿದೆ.

ಮುಂಬೈ(ನ.22): ಈಗಾಗಲೇ ನ್ಯಾ. ಲೋಧಾ ಸಮಿತಿಯಿಂದ ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯಿಂದಲೂ ಗದಾಪ್ರಹಾರವಾಗಿದೆ.

ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಶಶಾಂಕ್ ಮನೋಹರ್ ಆಯ್ಕೆಯಾದಾಗಿನಿಂದಲೂ ಬಿಸಿಸಿಐ ಮತ್ತು ಐಸಿಸಿ ನಡುವಣದ ಸಂಬಂಧ ಹದಗೆಟ್ಟಿದ್ದು, ಇದೀಗ ಇದು ಮತ್ತೊಂದು ಮಜಲು ಮುಟ್ಟಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ ಅನ್ನು ಐಸಿಸಿ ತನ್ನ ಪ್ರಮುಖ ಕಾರ್ಯಕಾರಿ ಸಮಿತಿ ಸಭೆಯಿಂದ ನಿರ್ಬಂಧಿಸಿರುವುದು ಅನುರಾಗ್ ಠಾಕೂರ್ ನೇತೃತ್ವದ ಬಿಸಿಸಿಐ ಚಡಪಡಿಕೆಯನ್ನು ಹೆಚ್ಚಿಸಿದೆ.

‘‘ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಂಗಪುರದಲ್ಲಿ ನಡೆದಿದ್ದ ಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನ್ನನ್ನು ಆಹ್ವಾನಿಸದ ಐಸಿಸಿ, ಇದೀಗ ಇದೇ ವಾರ ಅಡಿಲೇಡ್‌ನಲ್ಲಿ ಆರಂಭವಾಗುತ್ತಿರುವ ಎರಡನೇ ಸುತ್ತಿನ ಸಭೆಗೂ ಕೈಬಿಟ್ಟಿದೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ‘ದ ಟೈಮ್ಸ್ ಆ್ ಇಂಡಿಯಾ’ ಹೇಳಿದೆ.

‘‘ಅಡಿಲೇಡ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ನಾನು ಭಾಗವಹಿಸಲು ಇಚ್ಛಿಸುತ್ತೇನೆ ಎಂದು ಬಿಸಿಸಿಐ ಸ್ವತಃ ಐಸಿಸಿಗೆ ಪತ್ರ ಬರೆದರೂ, ಕಾರ್ಯಕಾರಿ ಗುಂಪನ್ನು ನೇಮಿಸುವುದು ನನ್ನ ಕೆಲಸ ಎಂದು ಐಸಿಸಿ ಪ್ರತಿಕ್ರಿಯಿಸಿದೆ’’ ಎನ್ನಲಾಗಿದೆ. ಅಂದಹಾಗೆ ಈ ಕಾರ್ಯಕಾರಿ ಸಮಿತಿಯು ವಿಶ್ವ ಕ್ರಿಕೆಟ್‌'ನ ಆದಾಯದ ಹಂಚಿಕೆಯನ್ನೂ ಒಳಗೊಂಡಂತೆ ಐಸಿಸಿಯ ಮುಂದಿನ ಆಡಳಿತ ಸ್ವರೂಪವನ್ನು ಪರವೀಕ್ಷಿಸುವ ಅಧಿಕಾರವನ್ನು ಹೊಂದಿದೆ. ಇಂಥ ಮಹತ್ವದ ಸಭೆಗೇ ಬಿಸಿಸಿಐಗೆ ಆಹ್ವಾನವಿಲ್ಲದಿರುವುದು ಐಸಿಸಿ ಮತ್ತು ಬಿಸಿಸಿಐ ನಡುವಣದ ಕಂದಕವನ್ನು ಹೆಚ್ಚಿಸಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ಸಕ್ರಿಯ ಅಟಗಾರ
ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!