
ವಿದರ್ಭ(ಸೆ.13): ಭಾರತದ ಮೂಲದ ಅಂಶುಮಾನ್ ರಾಥ್, ಹಾಂಕಾಂಗ್ ಕ್ರಿಕೆಟ್ ತಂಡದ ನಾಯಕನಾಗಿ ವಿಶ್ವದ ಗಮನಸೆಳೆದಿದ್ದರು. 2018ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ 96 ಎಸೆತದಲ್ಲಿ 73 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಪ್ರದರ್ಶನ ಅಂಶುಮಾನ್ ರಾಥ್ ಕರಿಯರ್ಗೆ ಹೊಸ ತಿರುವು ನೀಡಿತು. ಬಳಿಕ ನಾಯಕತ್ವದಿಂದ ಕೆಳಗಿಳಿದ ಅಂಶುಮಾನ್ ಇದೀಗ ಭಾರತದಲ್ಲಿ ಕ್ರಿಕೆಟ್ ಕರಿಯರ್ ಆರಂಭಿಸಲು ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಶಾ ಮಾತುಕತೆ; ಟ್ರೋಲ್ ಆದ ಅನುಷ್ಕಾ!
2020ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಹಾಂಕ್ ಕಾಂಗ್ ಪಾಲ್ಗೊಳ್ಳುತ್ತಿದೆ. ಈ ಟೂರ್ನಿಗೆ ಹಾಂಕ್ ಕಾಂಗ್ ತಯಾರಿ ನಡೆಸುತ್ತಿದೆ. ಆದರೆ ಅಂಶುಮಾನ್ ರಾಥ್ಗೆ ಸ್ಥಾನ ಸಿಕ್ಕಿಲ್ಲ. ಒಡಿಶಾದಲ್ಲಿ ಹುಟ್ಟಿ ಹಾಂಕ್ ಕಾಂಗ್ನಲ್ಲಿ ಕ್ರಿಕೆಟ್ ಕರಿಯರ್ ಆರಂಭಿಸಿದ ಅಂಶುಮಾನ್ ಇದೀಗ ವಿದರ್ಭ ತಂಡದ ಪರ ಆಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!
ಅಂಶುಮಾನ್ ಮನವಿಯನ್ನು ವಿದರ್ಭ ಕ್ರಿಕೆಟ್ ಸ್ವೀಕರಿಸಿದೆ. ಕ್ಲಬ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅಂಶುಮಾನ್ಗೆ ವಿದರ್ಭ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದಿದೆ. ವೇದಿಕೆ ರೆಡಿ ಇದೆ. ಸದ್ಯ ನಾನು ಉತ್ತಮ ಪ್ರದರ್ಶನ ನೀಡಿ ವಿದರ್ಭ ತಂಡಕ್ಕೆ ಆಯ್ಕೆಯಾಗೋ ವಿಶ್ವಾಸದಲ್ಲಿದ್ದೇನೆ ಎಂದು ಅಂಶುಮಾನ್ ರಾಥ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.