ಮಾನವೀಯತೆಗೆ ಗಡಿಯಿಲ್ಲ ಎನ್ನುವುದಕ್ಕೆ ಅಫ್ರೀದಿ-ಭಜ್ಜಿಯ ಈ ದೋಸ್ತಿಯೇ ಸಾಕ್ಷಿ

Published : Oct 28, 2017, 04:38 PM ISTUpdated : Apr 11, 2018, 01:10 PM IST
ಮಾನವೀಯತೆಗೆ ಗಡಿಯಿಲ್ಲ ಎನ್ನುವುದಕ್ಕೆ ಅಫ್ರೀದಿ-ಭಜ್ಜಿಯ ಈ ದೋಸ್ತಿಯೇ ಸಾಕ್ಷಿ

ಸಾರಾಂಶ

ಈ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟ್'ನ್ನು ಸಹಾಯಾರ್ಥ ದೇಣಿಗೆಯಾಗಿ ಅಫ್ರೀದಿಗೆ ನೀಡಿದ್ದರು.

ಬೆಂಗಳೂರು(ಅ.28): ಮಾನವೀಯತೆಗೆ ದೇಶ, ಧರ್ಮ, ಗಡಿ, ಯಾವುದೂ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಹರ್ಭಜನ್ ಸಿಂಗ್ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಅಫ್ರೀದಿಗೆ ಮಾಡಿರುವ ಸಹಾಯವೇ ಸಾಕ್ಷಿ.

ಹೌದು, ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾಗಿ ಕಾದಾಡುವ ಭಾರತ-ಪಾಕಿಸ್ತಾನ ತಂಡದ ಆಟಗಾರರ ಮೈದಾನದ ಹೊರಗೇ ಅಷ್ಟೇ ಸ್ನೇಹಿತರು ಎನ್ನುವುದಕ್ಕೆ ಮತ್ತೊಂದು ನಿದರ್ಶನ ನಮ್ಮ ಮುಂದಿದೆ.

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರೀದಿ ತಮ್ಮ ದೇಶದ ಬಡ ಜನರ ಸಹಾಯಕ್ಕಾಗಿ ನಡೆಸುತ್ತಿರುವ ಫೌಂಡೇಶನ್'ಗೆ ಹರ್ಭಜನ್ ಸಿಂಗ್ ನೆರವು ನೀಡುವ ಮೂಲಕ ಅಫ್ರೀದಿ ಕೆಲಸಕ್ಕೆ ಬೆಂಬಲ ಸೂಚಿದ್ದಾರೆ.

ಈ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟ್'ನ್ನು ಸಹಾಯಾರ್ಥ ದೇಣಿಗೆಯಾಗಿ ಅಫ್ರೀದಿಗೆ ನೀಡಿದ್ದರು.

ಕ್ರಿಕೆಟಿಗ ಈ ರೀತಿಯ ಸಹಾಯ-ಸಹಕಾರಗಳನ್ನು ನೋಡಿದರೆ ಮಾನವೀಯತೆಗೆ ಯಾವುದೂ ಅಡ್ಡಿಯಾಗಲಾರದು ಎನ್ನುವುದು ಸಾಭೀತಾದಂತಾಗಿದೆ.    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?